ಆಸ್ಕರ್ ಓಟದಲ್ಲಿರುವ ಚಿತ್ರಗಳ ಬಗ್ಗೆ


ರವೀಂದ್ರ ಒಳಗೆರೆ ಅವರು ಆಸ್ಕರ್ ಕಣದಲ್ಲಿರುವ ಕೆಲವು ಚಿತ್ರಗಳ ಬಗ್ಗೆ ಬರೆದ ಲೇಖನವಿದು. ಇದನ್ನು ಓದುಗರಿಗೆ ಲಭ್ಯವಾಗಲೆಂದು ಇಲ್ಲಿ ಪ್ರಕಟಿಸಲಾಗಿದೆ.

ಆಗಿನ್ನು ಅಮೇರಿಕಾದಲ್ಲಿ ಸಿವಿಲ್ ವಾರ್ ಶುರುವಾಗಿರಲಿಲ್ಲ. ವರ್ಣಬೇಧ ನೀತಿ ಮತ್ತು ಗುಲಾಮಗಿರಿ ಪದ್ದತಿಗಳು ಜೀವಂತವಾಗಿದ್ದ ಕಾಲವದು.ಬರೀ ಮೈ ಬಣ್ಣ ಮಾತ್ರದಿಂದಾಗಿ ಒಂದಿಡೀ ಜನಾಂಗವನ್ನೇ ಗುಲಾಮರು ಎಂದು ಪರಿಗಣಿಸಿ, ಅವರುಗಳನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಅಮಾನುಷ ಪದ್ಧತಿ ಉತ್ತುಂಗದಲ್ಲಿತ್ತು.ಆ ಕಾಲದಲ್ಲಿ ಪರಸ್ಪರ ಅವರನ್ನು ಮಾರಾಟಮಾಡುವ, ಅವರ ಕೈ ಕಾಲಿಗೆ ಸಂಕೋಲೆ ಹಾಕಿ ಕೆಲಸ ಮಾಡಿಕೊಳ್ಳುವುದನ್ನು ಬಿಳಿಯರು ತಮ್ಮ ಜನ್ಮ ಸಿದ್ಧ ಹಕ್ಕು ಎಂದೆ ಸ್ವಘೋಷಿತ ನಿಯಮವನ್ನು ಪಾಲಿಸುತ್ತಿದ್ದರಲ್ಲದೆ , ಕರಿಯರು ತಮ್ಮ ಸೇವೆ ಮಾಡುವುದಕ್ಕಾಗಿಯೇ ಹುಟ್ಟಿದ್ದಾರೆ ಎಂದೇ ನಂಬಿದ್ದರು. ಅವರಿಗೆ ಅಂದರೆ ಕರಿಯರಿಗೆ ಮನುಷ್ಯರಿಗಿರುವ ಯಾವ ಹಕ್ಕುಗಳು, ಸವಲತ್ತುಗಳೂ ಇರಲಿಲ್ಲ. ಸ್ಪೆಕ್ ಸಹೋದರರು ಇಂತಹ ಕರಿಯ ಗುಲಾಮರನ್ನು ಕೊಳ್ಳುವ ಮಾರುವ ಕಾರ್ಯ ನಿರ್ವಹಿಸುತ್ತಿದ್ದ ಖದೀಮರು. ಜಾಂಗೋ ಸೇರಿದಂತೆ ಹಲವಾರು ಜನರನ್ನು ಸಂಕೋಲೆ ಹಾಕಿಕೊಂಡು ನಡುಗುವ ಛಳಿಯಲ್ಲಿ ಬರಿಗಾಲಿನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಅವರಿಗೆ ಎದುರಾಗುವುದು ಡಾ.ಕಿಂಗ್ ಶುಲ್ಜ್. ಜರ್ಮನ್ ಮೂಲದ ಕಿಂಗ್ ತನ್ನನ್ನು ತಾನು ದಂತವೈದ್ಯ ಎಂದೆ ಹೇಳಿಕೊಳ್ಳುತ್ತಾನೆ. ಅಪ್ರತಿಮ ಮಾತುಗಾರ. ಮತ್ತು ಅಷ್ಟೇ ನಿಖರವಾದ ಗುರಿಕಾರ ಕೂಡ. ಯಾವ ಸಂದರ್ಭದಲ್ಲಿ ಏನು ಮಾಡುತ್ತಾನೆ ಯಾವುದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಆ ಬ್ರಹ್ಮನಿಂದಲೂ ಊಹಿಸಲಾಗದು.

django 1

ಪೆಕ್ ಸಹೋದರರ ಜೊತೆ ಮಾತನಾಡುವ ಡಾಕ್ಟರ್ ತನಗೊಬ್ಬ ಕರಿಯನ ಅವಶ್ಯಕತೆ ಇದೆ, ಅದಕ್ಕಾಗಿ ನಾನು ಎಷ್ಟು ಬೇಕಾದರೂ ಹಣಕೊಡಲು ಸಿದ್ಧನಾಗಿದ್ದೇನೆ ಎಂದು ಹೇಳಿ ಅವರಲ್ಲಿ ಆಸೆ ಹುಟ್ಟಿಸುತ್ತಾನೆ. ಆದರೆ ತನಗ್ಯಾರು ಬೇಕೋ ಅವರನ್ನು ನಾನೇ ಪರೀಕ್ಷಿಸಿ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಆಯ್ಕೆ ಮಾಡಿಕೊಳ್ಳುತ್ತಿದ್ದಾಗ ಜಾಂಗೋ ತನಗೆ ಸರಿಯಾದ ವ್ಯಕ್ತಿ ಎಂದೆ ನಿರ್ಧರಿಸುತ್ತಾನೆ. ಆದರೆ ಪೆಕ್ ಸಹೋದರರಿಗೆ ಡಾಕ್ಟರ್ ಮೇಲೆ ಅನುಮಾನ ಬಂದು ಅವನೆಡೆಗೆ ಬಂದೂಕು ತಿರುಗಿಸಿದಾಗ ಕ್ಷಣಮಾತ್ರದಲ್ಲಿ ಸಹೋದರರಲ್ಲಿ ಒಬ್ಬನನ್ನು ಕೊಂದು ಮತ್ತೊಬ್ಬನನ್ನು ಗಾಯಗೊಳಿಸುತ್ತಾನೆ. ನಂತರ ಜಾಂಗೋನನ್ನು ಕರೆದುಕೊಂಡು ಉಳಿದೆಲ್ಲರನ್ನೂ ಪೆಕ್ ನ ಬಂಧನದಿಂದ ಬಿಡಿಸುತ್ತಾನೆ.
ಜಾಂಗೋನ ಕಾಲಿನಲ್ಲಿದ್ದ ಸರಪಳಿ ಬಿಚ್ಚುವ ಮೂಲಕ ಅವನನ್ನು ಸ್ವತಂತ್ರ ವ್ಯಕ್ತಿ ಎಂದು ಘೋಷಿಸುತ್ತಾನೆ.
ಹಾಗೆ ಜಾಂಗೋ ಬಂಧಮುಕ್ತನಾಗುತ್ತಾನೆ.

ಜಾಂಗೋನನ್ನು ಬಂಧ ಮುಕ್ತನ್ನಾಗಿಸಿದ್ದರ ಹಿಂದೆ ಡಾಕ್ಟರ್ ಕಿಂಗನಿಗೆ ಬೇರೆಯದೇ ಆದ ಉದ್ದೇಶವಿದೆ. ಹಾಗೆ ಸ್ವತಂತ್ರನಾದ ಜಾಂಗೋನಿಗೂ ಅವನದೇ ಆದ ಒಂದು ಘನಕೆಲಸವಿದೆ. ಇಬ್ಬರು ಸೇರಿ ತಮ್ಮ ಗುರಿಯೆಡೆಗೆ ಹೆಜ್ಜೆ ಹಾಕುತ್ತಾರೆ. ಮುಂದೆ ಅವರ ಗುರಿ ನೆರೆವೇರಿಸಿಕೊಳ್ಳುವಲ್ಲಿನ ಪಯಣವಿದೆಯಲ್ಲ..ಅದು ರೋಚಕವೂ ಹೌದು ಕುತೂಹಲಕಾರಿಯೂ ಹೌದು. ಅದನ್ನು ನೋಡಿ ಸವಿಯಲಷ್ಟೇ ಸಾಧ್ಯ.
ಅತ್ಯುತ್ತಮ ಚಿತ್ರಕಥೆಗಾಗಿ ತನ್ನದೇ ನಿರ್ದೇಶನದ ಪಲ್ಪ್ ಪಿಕ್ಶನ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ನಿರ್ದೇಶಕ, ನಟ, ಛಾಯಾಗ್ರಾಹಕ,ಸಂಕಲನಗಾರ, ನಿರ್ಮಾಪಕಕ್ವೆ೦ಟಿನ್ ಟರಂಟಿನೋ ವಿಭಿನ್ನವಾದ ಚಿತ್ರಕರ್ಮಿ. ವಿಶಿಷ್ಟ ನಿರೂಪಣೆಯಿಂದ ವಿಚಿತ್ರವಾದ ಕಥೆಯಿಂದಾಗಿ ಚಿತ್ರರಂಗದಲ್ಲಿ ತನ್ನದೇ ಚಾಪು ಮೂಡಿಸಿರುವ ಪ್ರತಿಭಾವಂತ.ಕಿಲ್ ಬಿಲ್ 1,2., ಪಲ್ಪ್ ಪಿಕ್ಷನ್, ಇನ್ಗ್ಲೋರಿಯಸ್ ಬಾಸ್ಟರ್ಡ್ಸ್, ಜಾಕಿ ಬ್ರೌನ್, ರೆಸಾರ್ವೈರ್ ಡಾಗ್ಸ್ ಮುಂತಾದವುಗಳು ಕ್ವೆ೦ಟಿನ್ ಟರಂಟಿನೋನ ಜನಪ್ರಿಯ ಚಿತ್ರಗಳು.

ಈ ಸಾರಿಯ ಆಸ್ಕರ್ ಕಣದಲ್ಲಿ ಐದು ವಿಭಾಗಳಲ್ಲಿ ನಾಮಾಂಕಿತ ಗೊಂಡಿರುವ ಜಾಂಗೋ ಅನ್ ಚೈನೆಡ್ ಒಂದು ಮನರಂಜನಾತ್ಮಕ ಚಿತ್ರ. ಚಿತ್ರದ ತಿರುಳಲ್ಲಿ ಪ್ರತಿಕಾರದ ಎಳೆಯಿದ್ದರೂ ಚಿತ್ರ ಸೆಳೆಯುವುದು ಅದರ ನಿರ್ದೆಶನದಿಂದಾಗಿ. ಹಳೆಕಾಲದ ಚಿತ್ರದ ನಿರೂಪಣೆ ಕೂಡ ಹಳೆಯದರಂತೆಯೇ ಇದ್ದು, ಅದಕ್ಕೆ ತಕ್ಕುದಾದ ಹಿನ್ನೆಲೆ ಸಂಗೀತವಿರುವುದು ನಮ್ಮನ್ನು ಬೇರೆಯದೇ ರಂಜನೀಯ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಚಿತ್ರದ ಪ್ರಮುಖ ಆಕರ್ಷಣೆ ಸಂಭಾಷಣೆ. ಅಲ್ಲಲ್ಲಿ ನೆಗೆಯುಕ್ಕಿಸುವ ಸಂಭಾಷಣೆಗಳು ಮತ್ತು ಪಾತ್ರಧಾರಿಗಳು ಅದನ್ನು ಹೇಳುವ ಶೈಲಿ ನೋಡುಗನಿಗೆ ಮಜಾ ಕೊಡುತ್ತದೆ. ಅದರಲ್ಲೂ ಡಾ ಕಿಂಗ್ ಆಗಿ ಕ್ರಿಸ್ತೋಪ್ಹ್ ವಾಲ್ತಜ್ ಅಭಿನಯವಂತೂ ಸೂಪರ್. ಹಾಗೆ ಜಾಂಗೋ ಆಗಿ ಜೆಮಿ ಫಾಕ್ಸ್ನಜೊತೆಗೆ ಲಿಯೋನಾರ್ಡೋ ದಿ ಕಾರ್ಪಿಯೋ, ಸ್ಯಾಮುವೆಲ್ ಜಾಕ್ಸನ್ ಮುಂತಾದ ಅದ್ಭುತ ನಟರ ಬಳಗವೇ ಇದೆ.

Continue Reading

ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ


ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಇನ್‌ಸ್ಟಿಟ್ಯೂಟ್ (ಎಫ್‌ಟಿಐಐ) ವಿವಿಧ ಕೋರ್ಸ್‌ಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿಗಳನ್ನು ಸಲ್ಲಿಸಲು 2013 ಮಾರ್ಚ್ 16 ಕಡೆಯ ದಿನ. ಪ್ರತಿ ಕೋರ್ಸ್‌ಗಳಿಗೆ 12 ಮಂದಿಗೆ ಅವಕಾಶ. ಅರ್ಜಿ ಸಲ್ಲಿಸುವವರಿಗೆ ಇಂಗ್ಲಿಷ್ ಜ್ಞಾನ ಚೆನ್ನಾಗಿರಬೇಕು.

ftii

ಅರ್ಜಿ, ವಿವರಣಾ ಪತ್ರ (ಪ್ರಾಸ್ಪೆಕ್ಟಸ್) ಇತ್ಯಾದಿಯನ್ನು ಎಫ್‌ಟಿಐಐ ಗೆ ಸೂಕ್ತ ಡಿಮ್ಯಾಂಡ್ ಡ್ರಾಫ್ಟ್ ಕಳಿಸಿ ಪಡೆಯಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು 2,150 ರೂ. ಹಾಗೂ ಪರಿಶಿಷ್ಟ ವರ್ಗ-ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರು 650 ರೂ. ಗಳ ಡಿಮ್ಯಾಂಡ್ ಡ್ರಾಫ್ಟ್ ನ್ನು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಅಕೌಂಟ್ ಆಫೀಸರ್, ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹೆಸರಿಗೆ ಪಡೆದು ಕಳುಹಿಸಬೇಕು. ಜನವರಿ 21 ರ ನಂತರ ಫೆಬ್ರವರಿ 22 ರೊಳಗೆ ಮಾತ್ರ ಅಂಚೆಯಲ್ಲಿ ಕಳುಹಿಸುವ ಸೌಲಭ್ಯ ಲಭ್ಯವಿರಲಿದೆ. ಪುಣೆಯ ಕ್ಯಾಂಪಸ್ ನಲ್ಲೂ ಅರ್ಜಿ, ವಿವರಣಾ ಪತ್ರ ಲಭ್ಯವಿದೆ ಹಾಗೂ ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. Continue Reading

ಚಿತ್ರೋತ್ಸವ : ಮತ್ತಷ್ಟು ಚಿತ್ರಗಳು


ರವೀಂದ್ರ  ಒಳಗೆರೆ ಚಿತ್ರೋತ್ಸವದ ಮತ್ತಷ್ಟು ಚಿತ್ರಗಳ ಕುರಿತು ಸಂಕ್ಷಿಪ್ತವಾಗಿ ಬರೆದಿದ್ದಾರೆ. ಆ ಬರಹ  ಇಲ್ಲಿದೆ.
ಇವಾನ’ಸ್ ವುಮನ್: ಮಹಿಳಾ ನಿರ್ದೇಶಕಿ ಫ್ರಾನ್ಸಿಸ್ಕಾ ಸಿಲ್ವ ನಿರ್ದೇಶನದ ಸುಮಾರು 88 ನಿಮಿಷಗಳ ಅವಧಿಯ ಚಿಲಿಯನ್ ಚಲನಚಿತ್ರ ಇವಾನ’ಸ್ ವುಮನ್ 2011 ರಲ್ಲಿ ತೆರೆಗೆ ಬಂದಂತಹ ಚಲನಚಿತ್ರ. ಚಿತ್ರದ ನಾಯಕ ಇವಾನ್. ನಾಯಕಿ ನತಾಲಿಯನ್ನು ಒಂದು ಕೋಣೆಯೊಳಗೆ ಬಂಧಿಯನ್ನಾಗಿಸಿದ್ದಾನೆ. ಆಕೆಗೆ ಹೊತ್ತಿಗೊತ್ತಿಗೆ ಊಟ ತಿಂಡಿ ಕೊಡುತ್ತಿದ್ದಾನಾದರೂ ಆಕೆಯ ಪಾಲಿಗೆ ಸ್ವಾತಂತ್ರ್ಯ  ಮರೀಚಿಕೆಯಾಗಿದೆ. ನತಾಲಿ ಚಿಕ್ಕಂದಿನಿಂದಲೂ ಆತನ ಬಂಧನದಲ್ಲೇ ಇದ್ದಾಳೆ. ಬರುಬರುತ್ತಾ ಆಕೆಯ ಆಸೆಗಳಿಗೆ ಅಪಹರಣಕಾರ ಸ್ಪಂಧಿಸತೊಡಗುತ್ತಾನೆ. ಎಷ್ಟೇ ಅಂತರವನ್ನು ಕಾಪಾಡಿಕೊಳ್ಳಬೇಕೆನಿಸಿದರೂ ಆಕೆಯ ವರ್ತನೆಯಿಂದಾಗಿ ಹಲವಾರು ಸಾರಿ ಅಂತರಕಾಪಾಡಿಕೊಳ್ಳಲಾರದೆ ಸೋಲುತ್ತಾನೆ. ಕೊನೆಗೆ ಆಕೆಯ ಮೇಲೆ ಪ್ರೀತಿ ಹುಟ್ಟಿ ಯಾವಾಗಲೂ ನನ್ನೊಡನೆಯೇ ಇರು ಎಂದು ಭಾಷೆ ತೆಗೆದುಕೊಳ್ಳುತ್ತಾನೆ. ನತಾಲಿ ‘ಹೂಂ’ ಎನ್ನುತ್ತಾಳಾದರೂ ಸಮಯ ಸಾಧಿಸಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾಳೆ.

ಇಡೀ ಚಿತ್ರವನ್ನ  ಎರಡೇ ಪಾತ್ರಗಳು ಒಂದು ಕೋಣೆ/ಮನೆ ಆವರಿಸಿಕೊಂಡಿವೆ. ನತಾಲಿಯ ಒಂಟಿತನವನ್ನೂ ತೋರಿಸುತ್ತಾ ಹೋಗುವ ನಿರ್ದೇಶಕರು ಅದೇ ಹಾದಿಯಲ್ಲಿ ಅಪಹರಣಕಾರನ ಮನಸ್ಥಿತಿಯನ್ನೂ ತೋರಿಸುತ್ತಾರೆ. ಆದರೆ ಚಿತ್ರಕ್ಕೊಂದು ಅಥವಾ ಕಥೆಗೊಂದು ಹಿನ್ನೆಲೆ ಇಲ್ಲದಿರುವುದು ಸಿನಿಮಾದಲ್ಲಿ ಏನೋ ಕೊರತೆಯಿರುವುದನ್ನು ಎತ್ತಿ ತೋರಿಸುತ್ತದೆ. ಚಿತ್ರದಲ್ಲಿರುವ  ನತಾಲಿ-ಇವಾನ ರ ಸನ್ನಿವೇಶಗಳು ನಿಗೂಢತೆಯನ್ನು ಹುಟ್ಟಿಸಿದರೂ ಅದೂ ಕೆಲವೊಮ್ಮೆ ಬೇಸರ ತರಿಸುತ್ತದೆ. Continue Reading

60 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಆಹ್ವಾನ


ಕೇಂದ್ರ ಸರಕಾರದ ಚಿತ್ರೋತ್ಸವ ನಿರ್ದೇಶನಾಲಯ 60 ನೇ ರಾಷ್ಟ್ರೀಯ ವಾರ್ಷಿಕ ಸಿನಿಮಾ ಪ್ರಶಸ್ತಿಗಳಿಗೆ ಪ್ರವೇಶಗಳನ್ನು ಆಹ್ವಾನಿಸಿದೆ.

ಫೀಚರ್ (ಕಥಾ) ಮತ್ತು ನಾನ್ ಫೀಚರ್ (ಕಥೇತರ) ಎರಡು ವಿಭಾಗಗಳಲ್ಲಿ ಅರ್ಜಿಗಳನ್ನು ಕಳುಹಿಸಬಹುದಾಗಿದೆ. ಜತೆಗೆ ಸಿನಿಮಾ ಕುರಿತು ಬರೆದಿರುವ ಅತ್ಯುತ್ತಮ ಬರಹಗಳನ್ನೂ ಕಳುಹಿಸಬಹುದು.
2012 ರ ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ಸೆನ್ಸಾರ್ ಆಗಿರುವ ಚಲನಚಿತ್ರಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ಸಿನಿಮಾಗಳ ಮೇಲಿನ ವಿಮರ್ಶಾ ಬರಹಗಳು, ಪುಸ್ತಕಗಳು ಇದೇ ಅವಧಿಯೊಳಗೆ ಪ್ರಕಟಗೊಂಡಿರಬೇಕು.

Golden-Lotus

ತಮ್ಮ ಪ್ರವೇಶಗಳನ್ನು ಕಳುಹಿಸಲು ಜನವರಿ 21 ಕೊನೆಯ ದಿನಾಂಕ.

ಫೀಚರ್ ವಿಭಾಗದಲ್ಲಿ 30 ವಿವಿಧ ಪ್ರಶಸ್ತಿಗಳಿವೆ. ಅತ್ಯುತ್ತಮ ಚಿತ್ರ, ನಿರ್ದೇಶಕರ ಮೊದಲ ಚಿತ್ರ, ಜನಪ್ರಿಯ ಚಿತ್ರ, ಮಕ್ಕಳ ಚಿತ್ರ, ಅನಿಮೇಷನ್ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ನಟಿ, ಹಿನ್ನೆಲೆ ಗಾಯನ, ಸಂಗೀತ ನಿರ್ದೇಶನ, 8 ನೇ ಷೆಡ್ಯೂಲ್ ನಲ್ಲಿ ಸೇರಿಸಲಾದ ಪ್ರಾದೇಶಿಕ ಭಾಷೆಗಳಲ್ಲಿನ ಅತ್ಯುತ್ತಮ ಚಿತ್ರ ಇತ್ಯಾದಿ ವಿಭಾಗಗಳಿವೆ.

ನಾನ್ ಫೀಚರ್ ವಿಭಾಗದಲ್ಲಿ 22 ವಿವಿಧ ಪ್ರಶಸ್ತಿಗಳಿವೆ. ನಿರ್ದೇಶಕರ ಅತ್ಯುತ್ತಮ ಮೊದಲ ಚಿತ್ರ, ಅತ್ಯುತ್ತಮ ಕಲಾ/ ಸಾಂಸ್ಕೃತಿಕ ಚಿತ್ರ, ಅನಿಮೇಷನ್ ಚಿತ್ರ, ಅತ್ಯುತ್ತಮ ಸಿನೆ ಛಾಯಾಗ್ರಾಹಣ ಇತ್ಯಾದಿ.

ಸಿನಿಮಾ ವಿಮರ್ಶೆ ಕುರಿತಾಗಿ ಅತ್ಯುತ್ತಮ ಪುಸ್ತಕ ಮತ್ತು ಅತ್ಯುತ್ತಮ ವಿಮರ್ಶಕ ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಚಿತ್ರೋತ್ಸವ : ರೋಜ್ ನಿಂದ ಓಸ್ ವರೆಗೆ


ಐದನೇ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾದ ಚಿತ್ರಗಳ ಬಗ್ಗೆ ರವೀಂದ್ರ  ಒಳಗೆರೆ ಬರೆದಿದ್ದಾರೆ. ಓದಿ ಅಭಿಪ್ರಾಯಿಸಿ.
ರೋಜ್: ಚಿತ್ರದ ಕಥೆ 1945ರ ಕಾಲಘಟ್ಟದ್ದು. ಜರ್ಮನ್ ಸೈನಿಕನೊಬ್ಬನ ಪತ್ನಿ ಚಿತ್ರದ ನಾಯಕಿ ರೋಜ. ಸೈನಿಕ, ರಶಿಯನ್ ರ ದಾಳಿಯಿಂದ ಸತ್ತ ನಂತರ ರೋಜಾ ಒಂಟಿಯಾಗಿ ತನ್ನ ಜಮೀನಿನಲ್ಲೆ ಉಳಿದುಕೊಳ್ಳುತ್ತಾಳೆ. ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವನ್ನು ರಶಿಯನ್ ಸೈನಿಕರೂ ಎಸಗುತ್ತಿದ್ದರೂ ಆಕೆಯ ರಕ್ಷಣೆಗೆ ಯಾರೂ ಇರುವುದಿಲ್ಲ . ಚಿತ್ರದ ನಾಯಕ ಪೋಲೆಂಡ್ ದೇಶದ ಸೈನಿಕ. ವಾರ್ಸಾದ ಉಗಮದ ಸಮಯದಲ್ಲಿ ಕಣ್ಣಮುಂದೆಯೇ ತನ್ನ ಹೆಂಡತಿಯ ಮೇಲೆ ಅತ್ಯಾಚಾರವೆಸಗಿ ಸಾಯಿಸಿರುತ್ತಾರೆ. ತನ್ನ ಗುರುತನ್ನು ಮುಚ್ಚಿಟ್ಟುಕೊಳ್ಳಲು ಬರುವ ನಾಯಕ ರೋಜಾಳ ರಕ್ಷಣೆಗೆ ನಿಲ್ಲುತ್ತಾನೆ.ಮುಂದೆ ಆಕೆಯ ಹೊಲವನ್ನು ಹಸನುಮಾಡಿ, ಅವಳನ್ನು ರಶಿಯನ್ ಸೈನಿಕರಿಂದ ರಕ್ಷಿಸಲು ನಾನಾ ಪ್ರಯತ್ನ ಪಡುತ್ತಾನಾದರೂ ಆಕೆ ದುರ್ಮರಣಕ್ಕೀಡಾಗುತ್ತಾಳೆ . ಆಕೆಯ ಮಗಳನ್ನು ರಕ್ಷಿಸಲು ಪನತೊಡುವ ನಾಯಕ ಆನಂತರ ರಶಿಯನ್ ಸೈನಿಕರ ಕೈಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಾನೆ. ಅಷ್ಟೆಲ್ಲಾ ಹಿಂಸೆಯ ನಂತರವೂ ಬದುಕುಳಿಯುವ ನಾಯಕ ಕೊನೆಯಲ್ಲಿ ರೋಜಾಳ ಮಗಳನ್ನು ಹುಡುಕಿಕೊಂಡು ಹೋಗಿ, ಆಕೆಯನ್ನು ಸೇರುತ್ತಾನೆ.

ಚಿತ್ರದ ಕಥೆ, ನಿರೂಪಣೆ ನಮಗೆ 1945ರ ಕರಾಳ ದಿನಗಳನ್ನು ಹಾಗೆಯೇ ತೆರೆದಿಡುತ್ತದೆ. ಜಯ ಯಾರ ಕಡೆಗೆ ಆಗಲಿ, ಯುದ್ಧದ ಭೀಕರತೆ ಮಾತ್ರ ಎರಡೂ ಕಡೆ ತನ್ನ ಕರಾಳ ಪ್ರಭಾವವನ್ನು ಬೀರದೆ ಇರುವುದಿಲ್ಲ. ಅಲ್ಲಿ ಹೆಂಗಸು, ಮಕ್ಕಳು ಗಂಡಸೆಂಬ ಭೇದ ಭಾವವಿಲ್ಲ.. ಆವತ್ತಿನ ದಿನದಲ್ಲಿ ಬದುಕೆಂಬುದು ಅದೆಷ್ಟು ಕಷ್ಟ ಕರವಾಗಿತ್ತೆ೦ಬುದು ಪ್ರಾರಂಭದ ದೃಶ್ಯದಲ್ಲಿಯೇ ನಿರ್ದೇಶಕ ನಮಗೆ ಮನವರಿಕೆ ಮಾಡಿಕೊಟ್ಟುಬಿಡುತ್ತಾನೆ. ಚಿತ್ರದಲ್ಲಿ ಇನ್ನೊಂದು ಗಮನ ಸೆಳೆಯುವ ಅಂಶವೆಂದರೆ ಕಲಾ ನಿರ್ದೇಶನ. ಯುದ್ಧದ ನಂತರದ ದೃಶ್ಯಗಳನ್ನು ಯಥಾವತ್ತಾಗಿ ಕಟ್ಟಿಕೊಡುವುದರಲ್ಲಿ ನಿರ್ದೇಶಕನಿಗೆ ಸರಿಸಮನಾಗಿ ಛಾಯಾಗ್ರಾಹಕ ಮತ್ತು ಕಲಾನಿರ್ದೇಶಕರೂ ಕೈ ಜೋಡಿಸಿದ್ದಾರೆ. ಹಾಗಾಗಿ ಚಿತ್ರದಲ್ಲಿ ನೈಜಕತೆ ಮೆರೆದಿದೆ.

ಯುದ್ಧದ ಬಗ್ಗೆ ಹಾಲಿವುಡಿನಿಂದ ಹಿಡಿದು ಪ್ರಪಂಚದ ಎಲ್ಲಾ ಚಿತ್ರರಂಗಗಳಲ್ಲೂ ಸುಮಾರಷ್ಟು ಚಿತ್ರಗಳು ತೆರೆಕಂಡಿವೆ. ದೇಶ ದೇಶ ಬೇರೆಯಾದರೂ, ಕಥೆಗಳು ಬೇರೆಯಾದರೂ ಒಟ್ಟಾರೆ ಪ್ರಭಾವ ಮಾತ್ರ ಒಂದೇ ಇರುತ್ತದೆ:ಯುದ್ಧ ಎನ್ನುವುದು ಅಮಾನವೀಯ ಎಂಬುದು.
ಬರೀ ಮೂರೊತ್ತು ತಿಂದು ಬದುಕುವುದಕ್ಕೆ, ತಮ್ಮ ನೆಲದಲ್ಲಿ ಬೆಳೆದು ತಮ್ಮ ಪಾಡಿಗೆ ತಾವಿರುತ್ತೆವೆಂಬುದಕ್ಕೆ ಬಿಡದ ಯುದ್ಧ ಯಾವತ್ತೂ ಯಾರಿಗೂ ಬೇಡ ಎಂಬ ಸಂದೇಶವನ್ನು ಚಿತ್ರ ಯಶಸ್ವಿಯಾಗಿ ಸಾರುತ್ತದಷ್ಟೇ ಅಲ್ಲ ತುಂಬಾ ದಿನದ ವರೆಗೆ ರೋಸ್ ಮತ್ತು ನಾಯಕ ತಾದೆಯುಜ್ ಪಾತ್ರಗಳು ಕಾಡುತ್ತವೆ. ಅವಶ್ಯವಾಗಿ ಒಮ್ಮೆ ನೋಡಬೇಕಾದ ಚಿತ್ರ ರೋಜ್. Continue Reading

ಬೆಂಗಳೂರು ಚಿತ್ರೋತ್ಸವ ಸಮಾರೋಪ : ಕೂರ್ಮಾವತಾರ ಅತ್ಯುತ್ತಮ ಚಿತ್ರ


5 ನೇ ಬೆಂಗಳೂರು ಚಿತ್ರೋತ್ಸವ ಗುರುವಾರ ಸಮಾರೋಪಗೊಂಡಿತು.

ಚಿತ್ರ ಭಾರತಿ ಸ್ಪರ್ಧೆಯಡಿ ಭಾರತೀಯ ಚಿತ್ರಕ್ಕೆ ನೀಡುವ “ಸುಚಿತ್ರಾ ಸನ್ಮಾನ್” ಪ್ರಶಸ್ತಿಗೆ ಜಾಹ್ನು ಬರುವಾ ಅವರ “ಬಂಧೋನ್” ಸಿನಿಮಾ ಆಯ್ಕೆಯಾಯಿತು. ಕನ್ನಡ ಚಿತ್ರ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ “ಕೂರ್ಮಾವತಾರ” ಪ್ರಶಸ್ತಿ ಪಡೆದರೆ, ನೆಟ್ ಪ್ಯಾಕ್ ವಿಭಾಗದಡಿ ಪ್ಯಾಲೇಸ್ತೀಯನ್ ಮೂವಿ ಸೂಸನ್ ಯೂಸೂಫ್ ಅವರ `ಹಬೀಬಿ’ ಚಿತ್ರಗಳಿಗೆ ಚಿತ್ರೋತ್ಸವದ `ಶ್ರೇಷ್ಠ ಚಲನಚಿತ್ರ’ ಪ್ರಶಸ್ತಿ ದೊರಕಿತು. ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗದ ವಿಜೇತರಿಗೆ ಸ್ಮರಣಿಕೆಯೊಂದಿಗೆ 4 ಲಕ್ಷ ರೂಪಾಯಿ ಚೆಕ್, ಇತರ ಎರಡು ವಿಭಾಗಗಳಿಗೆ 2 ಲಕ್ಷ ರೂಪಾಯಿ ಚೆಕ್ ಹಾಗೂ ಸ್ಮರಣಿಕೆಯನ್ನು ವಿತರಿಸಲಾಯಿತು.

siddalingaiah jpg

ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ `ಸಾಹಿತ್ಯ, ಸಂಗೀತ, ಸಿನಿಮಾ ಕ್ಷೇತ್ರದಲ್ಲಿ ದಕ್ಷಿಣ ಭಾರತೀಯರದ್ದೇ ಮೇಲುಗೈ. ಸೃಜನಶೀಲತೆ ಹಾಗೂ ಸೌಜನ್ಯಕ್ಕೆ ಹೆಸರಾದವರು ಇವರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಪುರಸ್ಖೃತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ನಟ ಪ್ರಭುದೇವ್,

 

`ಗೋವಾ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಭಾರತದ ಭಾಷೆಗಳು ಅದರಲ್ಲೂ ಕನ್ನಡ ಸಿನಿಮಾಗಳು ಪ್ರವೇಶ ಪಡೆಯುವುದೇ ಕಷ್ಟ. ಹಾಗಾಗಿ ದಕ್ಷಿಣ ಭಾರತದ ಸಿನಿಮಾಗಳಿಗೆ ಬೆಂಗಳೂರು ಚಲನಚಿತ್ರೋತ್ಸವ ವೇದಿಕೆ ಕಲ್ಪಿಸುವ ಮೂಲಕ ದಕ್ಷಿಣ ಭಾರತದ ಚಿತ್ರೋತ್ಸವವಾಗಬೇಕು’ ಎಂದವರು ನಟಿ ಜಯಮಾಲಾ.

ಹಿರಿಯ ನಟಿ ಹರಿಣಿ, ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ನಟರಾದ ಅಂಬರೀಶ್, ಪ್ರಭುದೇವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು,  ಉತ್ಸವದ ಕಾರ್ಯಕಾರಿ ನಿರ್ದೇಶಕ ಎನ್.ಆರ್.ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ತಾರಾ ಅನೂರಾಧ ಇತರರು ಉಪಸ್ಥಿತರಿದ್ದರು.

ಚಿತ್ರೋತ್ಸವ : ವೇಳಾಪಟ್ಟಿಯಲ್ಲಿ ಒಂದಿಷ್ಟು ಬದಲು


Wednesday 26 December 2012

 
Inox 2
6:00 PM 
INI AVAN
Dir: Asoka Handagama
(104 min,2012,Sri Lanka)
Schedule_27

ಚಿತ್ರೋತ್ಸವ : ಭಾನುವಾರಕ್ಕೇ ಜನಜಾತ್ರೆ ಮುಗಿಯಿತೇ?


ಭಾನುವಾರಕ್ಕೇ ಜನ ಜಾತ್ರೆ ಮುಗಿಯತೇ?

5 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಮೂರು ದಿನ ಸಿಕ್ಕಾಪಟ್ಟೆ ಜನಸಂದಣಿ. ಆ ಸ್ಥಿತಿ ಯಾವ ಹಂತಕ್ಕೆ ತಲುಪಿತ್ತೆಂದರೆ, ಎಲ್ಲ ಚಿತ್ರಮಂದಿರಗಳ  ಎದುರೂ ಸಿನಿಮಾಸಕ್ತರು ಮುಷ್ಕರ ನಡೆಸಿದ್ದರು.

a-1

ಶುಕ್ರವಾರದಿಂದಲೇ ಈ ಸಮಸ್ಯೆ ಶುರುವಾಗಿತ್ತಾದರೂ, ಶನಿವಾರ ಮತ್ತು ಭಾನುವಾರ ಮಿತಿ ಮೀರಿತ್ತು. ಶುಕ್ರವಾರವಂತೂ ಐನಾಕ್ಸ್ 4 ನಲ್ಲಿ ಹಿರಿಯ ಚಿತ್ರ ನಿರ್ದೇಶಕರಾದಿಯಾಗಿ ಹಲವರು ಸೀಟಿಲ್ಲ ಎಂದು ಸಂಘಟಕರಿಂದ ಕೇಳಿಸಿಕೊಂಡು ವಾಪಸಾದರು.

ಐನಾಕ್ಸ್ 2 ರಲ್ಲಿ (ದಿ ಎಡ್ಜ್ ಆಫ್ ಹೆವನ್ ಚಿತ್ರ) ನೆಲದ ಮೇಲೆಲ್ಲಾ ಕುಳಿತ ಸಿನಿಮಾಸಕ್ತರನ್ನು ಹೊರಗೆ ಕಳುಹಿಸಲು ಸಂಘಟಕರು ಶತಪ್ರಯತ್ನ ಮಾಡಿದರಾದರೂ, ಸಿನಿಮಾಸಕ್ತರು ಕದಲಲಿಲ್ಲ. ಅಲ್ಲಿ ನೆಲದ ಮೇಲೆ ಕುಳಿತು ನೋಡಲು ಅವಕಾಶ ನೀಡಿರುವಾಗ ನಮಗೇಕೆ ಇಲ್ಲ ಎಂದು ಉಳಿದ ಚಿತ್ರಮಂದಿರಗಳೆದುರು ಸಂಘಟಕರನ್ನು ಮುತ್ತಿಕ್ಕಿದ್ದರು ಸಿನಿಮಾಸಕ್ತರು. ಈ ಹಿನ್ನೆಲೆಯಲ್ಲಿ ಡೈಲಿ ಪಾಸುಗಳ ವಿತರಣೆಯನ್ನೂ ಸ್ಥಗಿತಗೊಳಿಸಲಾಗಿತ್ತು.

rush

ಅದೆಲ್ಲಾ ಮುಗಿದಿದೆ. ಸೋಮವಾರ ಲಿಡೋ, ಐನಾಕ್ಸ್ ನಲ್ಲಿ ಸಿನಿಮಾಗಳಿಗೆ ಜನರೇ ಇರಲಿಲ್ಲ. ಅದರಲ್ಲೂ ಬೆಳಗ್ಗೆಯ ಚಿತ್ರಗಳಿಗೆ ಅರ್ಧದಷ್ಟು ಆಸನಗಳಷ್ಟೇ ಭರ್ತಿಯಾಗಿದ್ದವು. ಮಧ್ಯಾಹ್ನದ ಮೇಲೆ ಸ್ವಲ್ಪ ಪರವಾಗಿಲ್ಲ  ಎನ್ನುವಂತಾಗಿದ್ದರೂ ರಾತ್ರಿಯ ಷೋಗಳಿಗೆ ಮತ್ತೆ ಅದೇ ಸ್ಥಿತಿ.

ಸೋಮವಾರ ಬೆರಳೆಣಿಕೆಯಷ್ಟು ಡೈಲಿ ಪಾಸ್ ಗಳನ್ನು ವಿತರಿಸಿದರೂ, ನಂತರ ಸ್ಥಗಿತಗೊಳಿಸಲಾಯಿತು. ಮಂಗಳವಾರ ಕ್ರಿಸ್ ಮಸ್ ರಜೆ ಇರುವುದರಿಂದ ಮತ್ತೆ ಸಿನಿಮಾಸಕ್ತರು ಚಿತ್ರಮಂದಿರಗಳತ್ತ ದಾಳಿ ಇಡಬಹುದು ಎಂದು ಸಂಘಟಕರ ಲೆಕ್ಕಾಚಾರ.  Continue Reading

ಚಿತ್ರೋತ್ಸವದ ಚಿತ್ರಗಳು: ಪರ್ವಿಜ್ ಮತ್ತು ಹೋಮ್


ರವೀಂದ್ರ ವಳಗೆರೆಯವರು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾದ  ಎರಡು ಚಿತ್ರಗಳ ಬಗ್ಗೆ ಬರೆದಿದ್ದಾರೆ. ಅದನ್ನು ಓದಿ ಅಭಿಪ್ರಾಯಿಸಿ.
ತನ್ನ ರೈನಿ ಸೀಸನ್ [2010]ಚಿತ್ರದಿಂದ ಗಮನಸೆಳೆದಿದ್ದ ನಿರ್ದೇಶಕ ಮಾಜಿದ್ ಬರ್ಜೆಗರ್ನಿರ್ದೇಶನದ ಚಲನಚಿತ್ರಪರ್ವಿಜ್. ಚಿತ್ರದ ಪ್ರಮುಖ ಪಾತ್ರಧಾರಿ ಪರ್ವಿಜ್ ಗೀಗ ಐವತ್ತು ವರ್ಷ ವಯಸ್ಸು. ತನ್ನ ಜೀವಮಾನದಲ್ಲೇ ಏನೊಂದು ಕೆಲಸವನ್ನೂ ಮಾಡದೆ ಅಪ್ಪನ ಮನೆಯಲ್ಲಿ ಉಂಡಾಡಿ ಗುಂಡನಂತೆ ಕಾಲ ಕಳೆದವ. ಅವನ ಸುತ್ತಮುತ್ತಲ ಜನರಿಗೆ ಪರ್ವಿಜ್ ಎಂದರೆ ಏತಕ್ಕೂ ಬಾರದ ನಾಲಾಯಕ್ಕು, ನಿರುಪಯೋಗಿ ಎನ್ನುವ ಭಾವವಿದೆ. ಅದನ್ನು ಯಾವತ್ತೂ ಮುರಿಯುವ, ಅವರ ಅನಿಸಿಕೆಯನ್ನು ಸುಳ್ಳುಮಾಡುವ ಯಾವ  ಉಮ್ಮೇದು ಎಮ್ಮೆಕಿವಿಯ ಪರ್ವಿಜ್ ಗೆ ಇಲ್ಲ.
a-1
ಆದರೆ ಬದುಕು ಅಂದುಕೊಂಡ ಹಾಗೆ ಇರುವುದಿಲ್ಲವಲ್ಲ. ಪರ್ವಿಜ್ ನ ತಂದೆ ಮತ್ತೆ ಮರುಮದುವೆಯಾಗಲು ಯೋಚಿಸಿ, ನಿಶ್ಚಯಿಸಿಕೊಂಡ ಮೇಲೆ ಮಗನನ್ನು ಮನೆಯಿಂದ ಹೊರಗಿರಿಸಲು ಯೋಚಿಸುತ್ತಾನೆ. ಅಷ್ಟೇ ಅಲ್ಲ ಅವನ ದೈನಂದಿನ ಖರ್ಚುವೆಚ್ಚವನ್ನು ತಾನೇ ವಹಿಸಿಕೊಂಡು ಅವನಿಗೊಂದು ಮನೆಯನ್ನೂ ಹುಡುಕಿ ಅದರ ಬಾಡಿಗೆಯನ್ನು ತನ್ನ ಜೇಬಿನಿಂದಲೇ ಕೊಡಲು ನಿರ್ಧರಿಸುತ್ತಾನೆ. ಪರ್ವಿಜ್ ಗೆ ಈ ವಿಷಯ ಇರುಸುಮುರುಸಾದರೂ ಅವನ ನಿರ್ಧಾರಕ್ಕಿಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲವಾದ್ದರಿಂದ ಮರುಮಾತಾಡದೆ ಅಪ್ಪ ನೋಡಿದ ಇನ್ನೊಂದು ಮನೆಗೆ ವಾಸ್ತವ್ಯ ಬದಲಿಸುತ್ತಾನೆ. ಹೊಸಮನೆಯಲ್ಲಿ ಪಕ್ಕದ ಮನೆಯ ಹುಡುಗ ಕೂಡ ಪರ್ವಿಜ್ ನ ಮಾತಿಗೆ ಬೆಲೆಕೊಡದೆ ತನ್ನಿಷ್ಟದಂತೆ ಪರ್ವಿಜ್ ಮನೆಯನ್ನ ಬಳಸಿಕೊಳ್ಳತೊಡಗುತ್ತಾನೆ.

ಹೀಗೆ ಎಲ್ಲ ಕಡೆಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗುವ ಪರ್ವಿಜ್ ತನ್ನ ಅಸ್ತಿತ್ವವನ್ನು, ಇರುವಿಕೆಯನ್ನು ತೋರಿಸುವ ಪ್ರಯತ್ನ ಪಡುತ್ತಾನೆ. ಅದು ಚಿತ್ರವನ್ನೂ ಏಕಾಏಕಿ ಆಸಕ್ತಿಕರವನ್ನಾಗಿ ಮಾಡುವುದಲ್ಲದೆ, ಚಿತ್ರದ ಮಗ್ಗಲಿಗೆ ಹೊಸ ಚೈತನ್ಯ ತುಂಬುತ್ತದೆ. ಮುಂದಿನ ಕಥೆ ಇಷ್ಟೆ. ಅಪ್ಪನಿಗೆ,  ತನ್ನನ್ನು ರೇಗಿಸುತ್ತಿದ್ದ ಲಾಂಡ್ರಿಯವನಿಗೆ, ತನ್ನಪ್ಪನ ಮಾತನ್ನು ಕೇಳಿಕೊಂಡು ಪರ್ವಿಜ್ ನನ್ನು ಮನೆಯಿಂದ ಖಾಲಿ ಮಾಡಿಸಲು ಬಂದ ಮನೆ ಮಾಲೀಕನಿಗೆ, ಸದಾ ಗೋಳು ಹೊಯ್ದುಕೊಳ್ಳುತ್ತಿದ್ದ ಪಕ್ಕದ ಮನೆಯ ಹುಡುಗನಿಗೆ ಎಲ್ಲರಿಗೂ ಪಾಠ ಕಲಿಸಲು ಪರ್ವಿಜ್ ನಿರ್ಧರಿಸುತ್ತಾನೆ. ಆವಾಗ ನಡೆಯುವ ಘಟನೆಗಳು ಅಥವಾ  ಪರ್ವಿಜ್ ಕೃತ್ಯಗಳು ಇಡೀ ಚಿತ್ರಕ್ಕೆ ಹೊಸ ಆಯಾಮವನ್ನು ಕೊಡುತ್ತದೆ. Continue Reading

ಸಂವಾದ ಬೇಕು : ಗಿರೀಶ್ ಕಾಸರವಳ್ಳಿ


ಐದನೇ ಬೆಂಗಳೂರು ಚಿತ್ರೋತ್ಸವ ನಿಜವಾಗಲೂ ಖುಷಿ ನೀಡಿದೆ, ಹಲವು ಕಾರಣಗಳಿಗಾಗಿ ಎಂದವರು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ.

girish

ಈ ಚಿತ್ರೋತ್ಸವದಲ್ಲಿ ಪುನರಾವಲೋಕನ(Retrospective) ವಿಭಾಗದಲ್ಲಿ ಅವರ ಚಿತ್ರಗಳು ಪ್ರದರ್ಶಿತವಾಗುತ್ತಿರುವುದಕ್ಕೆ ಅತೀವ ಸಂತಸವನ್ನು ವ್ಯಕ್ತಪಡಿಸಿದ ಗಿರೀಶ್, ಇದು ಒಬ್ಬ ಚಿತ್ರ ನಿರ್ದೇಶಕನಿಗೆ ಸಲ್ಲುವ ಗೌರವ. ಕೋಲ್ಕತ್ತಾ, ಗೋವಾ ಚಿತ್ರೋತ್ಸವಗಳಲ್ಲಿ ಈ ವಿಭಾಗದಡಿ ನನ್ನ ಚಿತ್ರ ಪ್ರದರ್ಶಿತವಾಗಬೇಕಿತ್ತು. ಕಾರಣಾಂತರಗಳಿಂದ ಆಗಿರಲಿಲ್ಲ. ಇಲ್ಲಿ ಆ ಗೌರವ ಸಿಕ್ಕಿದ್ದು ಖುಷಿಯಾಯಿತು ಎಂದರು.

ಈ ಉತ್ಸವದಲ್ಲಿ ಸಾಕಷ್ಟು ಬದಲಾವಣೆಯನ್ನು ಗಮನಿಸುತ್ತಿದ್ದೇನೆ. ಸಾಮಾನ್ಯವಾಗಿ ಚಿತ್ರೋತ್ಸವಗಳಲ್ಲಿ ಚಿತ್ರ ಶುರುವಾದ ೫ ನಿಮಿಷಕ್ಕೇ ಕೆಲವರು ಎದ್ದು ಹೋಗ ತೊಡಗುತ್ತಾರೆ. ಸಾಮಾನ್ಯ ಸಿದ್ಧತೆಯನ್ನೂ ನಡೆಸಿಕೊಳ್ಳದೇ ಬಂದರೆ ಹೇಗೆ ಎಂಬ ಪ್ರಶ್ನೆ ನನ್ನದಾಗಿತ್ತು. ಆದರಿಲ್ಲಿ, ಅಂಥ ಪ್ರವೃತ್ತಿ ಇಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.

ಸಂವಾದ ಬೇಕು
ಪ್ರತಿ ಸಿನಿಮಾಗಳ ನಂತರ ನಿರ್ದೇಶಕರೊಂದಿಗೆ ಸಂವಾದ ಸಾಧ್ಯವಾಗಬೇಕು. ಇದನ್ನೊಂದು ಚಿತ್ರೋತ್ಸವಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಸೂಕ್ತ. ಚಿತ್ರೋತ್ಸವಗಳಲ್ಲಿ ಭಾಗವಹಿಸುವ ನಿರ್ದೇಶಕರ ಸಿನಿಮಾಗಳನ್ನು ಬೇರೆ ಪಟ್ಟಿ ಮಾಡಬೇಕು. ಅದರಂತೆ, ಪ್ರೇಕ್ಷಕರೊಂದಿಗೆ ಪ್ರದರ್ಶನ ಮುಗಿದ ನಂತರ ಕ್ಲುಪ್ತ ಸಂವಾದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದವರು ಗಿರೀಶ್. Continue Reading