“ಅರ್ಥ” ಸಿನಿಮಾ : ಒಂದು ಒಳ್ಳೆಯ ನಿರೂಪಣೆ
ಬಿ. ಸುರೇಶ ನಿರ್ದೇಶಿಸಿದ “ಅರ್ಥ” ಸಿನಿಮಾ ಇತ್ತೀಚೆಗೆ ಸಮುದಾಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. ಈ ಚಿತ್ರದ ಬಗ್ಗೆ ವಿನುತಾ ಅವರು ಬರೆದ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ.
ಭಾರತದ ಸಾಮಾನ್ಯ ಕುಟುಂಬಗಳಲ್ಲಿ ಆರ್ಥಿಕ ಕಾರಣಗಳಿಂದ ಹುಟ್ಟುತ್ತಿರುವ ಸಣ್ಣ ಜಗಳಗಳು ಮನೆಯಲ್ಲಿರುವ ಮಕ್ಕಳ ಮನಸ್ಸುಗಳಲ್ಲಿ ಗೊಂದಲಗಳನ್ನು ಏಳಿಸುತ್ತಿವೆ. ಮನೆಯಲ್ಲಿ ನೆಮ್ಮದಿ ಕಾಣದ ಮಕ್ಕಳು ಹಿಂಸೆಯಲ್ಲಿ ಆನಂದ ಕಾಣುವಂತಹ ಸ್ಥಿತಿಯುಂಟಾಗುತ್ತಿದೆ. ಇದರಿಂದಾಗಿ ನಮ್ಮ ಯುವಜನಾಂಗವು ಆತಂಕವಾದ ಕಡೆಗೆ ಅಥವಾ ಕೋಮುವಾದಿತ್ವ ಅಥವಾ ಮೂಲಭೂತವಾದಿತ್ವದ ಕಡೆಗೆ ತಿರುಗುತ್ತಿದ್ದಾರೆ. ಇದರಿಂದ ನಮ್ಮ ದೇಶಾದ್ಯಂತ, ಜಾತಿ-ಧರ್ಮಗಳನ್ನು ಮೀರಿ ಹಿಂಸಾಚಾರಗಳು ಆಗುತ್ತಿವೆ. ಇದರಿಂದಾಗಿ ನಮ್ಮ ದೇಶವು ವಿಚ್ಛಿದ್ರಕಾರಿ ಮನಸ್ಸುಗಳ ಕೈಯಲ್ಲಿ ಹೇಗೆ ಸೇರಿಹೋಗುತ್ತಿದೆ ಎಂಬುದನ್ನು ಪ್ರತಿನಿತ್ಯ ಪತ್ರಿಕೆಗಳು ಹೆಣಗಳ ಸಂಖ್ಯೆಯನ್ನು ಮುಖಪುಟದಲ್ಲಿಯೇ ಹಾಕುವ ಮೂಲಕ ದಾಖಲಿಸುತ್ತಿವೆ. ಇವೆಲ್ಲವುಗಳ ಪರಿಣಾಮವಾಗಿ ಚಿತ್ರಿತವಾದದ್ದೇ “ಅರ್ಥ”. – ಇದು “ಅರ್ಥ” ಚಿತ್ರದ ಕುರಿತಾಗಿ ಸಮುದಾಯ ((ಸಮುದಾಯ ಚಿತ್ರೋತ್ಸವ – 2009) ನೀಡಿರುವ ಒಕ್ಕಣೆ.
“ಅರ್ಥ” – ಈ ಪದ, ತಿರುಳು, Meaning ಎಂಬುದಾಗಿ ಮತ್ತು ಹಣ, ವಿತ್ತ ಎಂಬುದಾಗಿ ಚಾಲ್ತಿಯಲ್ಲಿದೆ. ಇವೆರಡೂ ಪ್ರಯೋಗಗಳನ್ನು ಬಳಸಿಕೊಂಡು ಇನ್ನೊಂದು ಸಮಾಜಮುಖಿ ಅರ್ಥವನ್ನು ಕಂಡುಕೊಳ್ಳುವಲ್ಲಿ ನವೀನ ಪ್ರಯೋಗವೇ ಈ ಚಿತ್ರ ಎಂದು ಭಾವಿಸುತ್ತೇನೆ. ಹಂತ ಹಂತವಾಗಿ ಸಮಸ್ಯೆಗಳು ಹರಡಿಕೊಳ್ಳುತ್ತಾ ಸಾಗುತ್ತವೆ. ಒಟ್ಟಾರೆ, ಶ್ರೀಸಾಮಾನ್ಯನ ದೈನಂದಿನ ಆರ್ಥಿಕ ಬಿಕ್ಕಟ್ಟುಗಳು, ಜಾಗತೀಕರಣ, ಪಾಶ್ಚಿಮಾತ್ಯ ಅಂಧಾನುಕರಣೆ ಮತ್ತು ಜಾತೀಯ ಕಲಹ ಅಥವಾ ಮೂಲಭೂತವಾದ ಎಂಬುದಾಗಿ ವಿಂಗಡಿಸಬಹುದು.

ಶ್ರೀಸಾಮಾನ್ಯನನ್ನು ಆಟೋಚಾಲಕ ಸೀನಪ್ಪ (ರಂಗಾಯಣ ರಘು) ಪ್ರತಿನಿಧಿಸಿದ್ದಾನೆ. ಆಟೋ ಮಾಲೀಕನಿಗೆ ದೈನಂದಿನ ಬಾಡಿಗೆ ನೀಡಲಾಗದೆ ಉದ್ಭವಿಸುವ ಆರ್ಥಿಕ ಸಮಸ್ಯೆ ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತದೆ. ಪತ್ನಿ (ಮೇಘ ನಾಡಿಗೇರ್) ಯನ್ನು ಹಿಂಸಿಸುವ, ಮಕ್ಕಳನ್ನು ದೂಷಿಸುವುದರೊಂದಿಗೆ ಅವಸಾನಗೊಳ್ಳುತ್ತದೆ. ಇಲ್ಲಿ ಹಿಂಸೆಯ ವೈಭವೀಕರಣವಾಗಿದೆಯೇನೋ ಎಂದೊಂದು ಕ್ಷಣ ಅನ್ನಿಸಿದರೂ, ಅದೇ ವಾಸ್ತವ ಎನ್ನುವ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ. Read the rest of this entry »
ಸಾಂಗತ್ಯ ಪತ್ರಿಕೆಗೆ ಲೇಖನಗಳ ಆಹ್ವಾನ
ಸಾಂಗತ್ಯ ಈಗಾಗಲೇ ಪ್ರಕಟಿಸಿರುವಂತೆ ಮ್ಯಾಗಜೈನ್ ತರುವತ್ತ ಸಿದ್ಧತೆ ಆರಂಭಿಸಿದೆ.
ಮೂರು ತಿಂಗಳಿಗೊಮ್ಮೆ ಬರುವ ಈ ಪತ್ರಿಕೆ ಸಿನಿಮಾ ಗ್ರಹಿಕೆಯಿಂದ ಹಿಡಿದು ತಾಂತ್ರಿಕ ಸಂಗತಿಗಳ ಬಗ್ಗೆಯೂ ಅರಿವು ಮೂಡಿಸುತ್ತಲೇ ಚಿತ್ರಭಾಷೆಯ ಮಾಧ್ಯಮವಾದ ಸಿನಿಮಾ ಕುರಿತು ಪ್ರೀತಿ, ಅಕ್ಕರೆ ಹಾಗೂ ಒಲವು ಬೆಳೆಸುವುದು ಸಾಂಗತ್ಯದ ಉದ್ದೇಶ.
ಬರಿದೇ ಅಂಕಣಗಳಿಂದ ತುಂಬಿ ಹೋಗದೇ, ಒಂದಿಷ್ಟು ಹೊಸ ಹೊಳಹುಗಳಿಂದಲೂ ಇರಬೇಕೆಂಬುದು ನಮ್ಮ ಮ್ಯಾಗಜೈನ್ ನ ಉದ್ದೇಶ. ಸಿನಿಮಾ ವೀಕ್ಷಣೆ ಕುರಿತು ಪ್ರೀತಿ ಬೆಳೆಸುವತ್ತಲೇ ಸಿನಿಮಾ ಮಾಧ್ಯಮದ ಬಗ್ಗೆ ಮಗುಮ್ಮಾಗಿರದೇ ಒಂದಿಷ್ಟು ಚರ್ಚೆ ಬೆಳೆಸುವುದು, ಬರಹಗಳನ್ನು ಬರೆಯುವಂತೆ ಪ್ರೇರೇಪಿಸಲು ಚಿಂತನೆ ನಡೆಸಿದೆ.
ಹೀಗಾಗಿ ನೀವೆಲ್ಲಾ ಅದಕ್ಕೆ ಬರೆಯಬಹುದು. ಸಿನಿಮಾ ಗ್ರಹಿಕೆ, ಸಿನಿಮಾ ವಿಮರ್ಶೆ, ಒಳ್ಳೆ ಸಂದರ್ಶನ, ತಾಂತ್ರಿಕ ಸಂಗತಿಗಳ ಬಗೆಗಿನ ಲೇಖನಗಳೂ ಸೇರಿದಂತೆ ಸಿನಿಮಾಕ್ಕೆ ಸಂಬಂಧಿಸಿದಂತೆ ಎಲ್ಲ ಬರಹಗಳನ್ನೂ ಕಳಿಸಬಹುದು saangatyamagazine@gmail.com.
ಒಳ್ಳೊಳ್ಳೆ ಲೇಖನಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಹಳೇಬೇರು-ಹೊಸಚಿಗುರುಗಳು ನಮ್ಮಲ್ಲಿ ನಳನಳಿಸಬೇಕೆಂಬುದು ನಮ್ಮ ಆಶಯ. ತಡ ಮಾಡದೇ ಲೇಖನಗಳನ್ನು ಕಳಿಸಿ.
Remembering Shankar Nag-ಶಂಕರನಾಗರನ್ನು ನೆನಪಿಸಿಕೊಳ್ಳುತ್ತಾ
ಪತ್ರಕರ್ತ ನಿರಂಜನ್ ಕಗ್ಗೆರೆ ಅವರು ಕನ್ನಡದ ಅತ್ಯಂತ ಪ್ರಯೋಗಶೀಲ ನಟ, ನಿರ್ದೇಶಕ ಶಂಕರನಾಗರ 55 ನೇ ಹುಟ್ಟು ಹಬ್ಬದ ದಿನದಂದು ಅವರ ನೆನಪನ್ನು ಕುರಿತು ಬರೆದ ಲೇಖನವಿದು. ಓದಿ ಹೇಳಿ.
It’s been two decades since the ‘Karate king’ of Sandalwood, a maverick film maker, theatre artist, Shankar Nag died in a road accident near Davanagere. Known for his visionary cinemas, technical skills, Shankar was nothing but a gift not just to the Sandalwood, but for the Indian Cinema industry. While people from the South remember him for his noteworthy movies like Minchina Ota, Ondanondu Kaladalli, Ondu Muttina Kathe, Geetha, Accident and Nodi Swami Navirodu Heege, people from the North remember him for his memorable performace in Utsav, Ankur, Nishant and the much cherished episodes of R K Narayan’s Malgudi Days on small screen.
Last week, while passing through the same stretch near Davanagere where Shankar met with the tragic end, memories of his films started popping up. Hailing from a remote hamlet of Mallapur village in Honavar taluk of Uttara Kannada district, Shankar was fluent in Kannada, Konkani and Martahi. In fact he started his career with Marathi theatre in Mumbai. However, Shankar’s stint with the success started when his elder brother Ananth Nag brought him back to Bangalore.

Continuing with his passionate theatrical activities, Shankar rose to national level after his brilliant performance in Girish Karnad’s epic movie Ondanondu Kaaladalli (Once upon a time) an adaptation of Kurosawa’s Seven Samurai. Displaying his acting skills while donning the lead role of a mercenary, Shankar won the best actor award at the New Delhi International Film Festival. Not confining his talent just to the parallel cinema medium, Shankar went on to do mass oriented masala movies targeting the mass which earned him the sobriquet – ‘Karate King’. His role of an auto driver in Auto Raja, portraying the humbleness of autowalas, made him popular among the mass and several auto stands till today have been named after him.
When television media was making inroads into the household of every Indian, Shankar cast his spell there also. R K Narayan’s Malgudi Days was testimonial to Shankar’s oeuvre on small screen. Besides the serial’s impish character ‘Swami’, the title music composed by L Vaidyanathan through nasal twang, is a huge hit till today. While doing his best to the medium that shot him to the fame, Shankar and his wife Arundhati Nag set up Sanket, an amateur theatre group. The troupe was instrumental in bringing historic plays like Nagamandala, Anju Mallige by Girish Karnad onto stage.
But for a genius who could have earned many laurels for Karnataka, fate had something different in store. On his way to the sets of his movie Jokumara Swamy, directed by Girish Karnad, Shankar met with an accident and died on the spot. Nevertheless, every movie buffs, theatre enthusiasts remember Shankar and his contributions
ನೀವು ನೋಡದ ರೆಹಮಾನ್
ಎಸ್. ಕುಮಾರ್ ಬರೆದ ರೆಹಮಾನ್ ಬಗೆಗಿನ ಲೇಖನ ಖುಷಿ ಕೊಡುವಂಥದ್ದು. ನವಿರಾದ ಶೈಲಿಯ ಲೇಖನವನ್ನು ಇಲ್ಲಿ ಹಾಕಿದ್ದೇವೆ. ಓದಿ ಅಭಿಪ್ರಾಯ ತಿಳಿಸಿ. ಇದು ಸ್ಲಂ ಡಾಗ್ ಮಿಲಿನೇರ್ ಗೆ ಆಸ್ಕರ್ ಬಂದ ಸಂದರ್ಭದಲ್ಲಿ ಬರೆದದ್ದು.
ನೀವು ನೋಡದ ರೆಹಮಾನ್
ದೇವ ದೂತ!
ಇದು ನಲುವತ್ತನಾಲ್ಕು ವರ್ಷಗಳ ಹಿಂದಿನ ಕತೆ. ತಮಿಳು ಸಂಗೀತ ಸಂಯೋಜಕ ಆರ್.ಕೆ.ಶೇಖರ್ ಮತ್ತು ಕಸ್ತೂರಿ ದಂಪತಿಗಳ ಮಡಿಲಲ್ಲಿ ಆಗಲೇ ಒಬ್ಬ ಮಗಳಿದ್ದಳು. ಅದೇ ಹೊತ್ತಿಗೆ ಅವರಿಗೊಂದು ಭವಿಷ್ಯನುಡಿ ಹೇಳಿತ್ತು. ನಿಮಗೊಬ್ಬ ಪುತ್ರ ಜನಿಸುತ್ತಾನೆ. ಆತನ ಹೆಸರು ಇಡೀ ಜಗತ್ತಲ್ಲೇ ಬೆಳಗುತ್ತದೆ. ಆತನೂ ಒಬ್ಬ ಸಂಗೀತಗಾರನಾಗುತ್ತಾನೆ. ಆತನ ಖ್ಯಾತಿ ಆಕಾಶದೆತ್ತರ ಮುಟ್ಟುತ್ತದೆ.
ಮರುವರ್ಷ ಶೇಖರ್ ಅವರಿಗೆ ಮಗ ಹುಟ್ಟಿದ! ಸಂಗೀತದ ವಾತಾವರಣವೇ ತುಂಬಿದ ಮನೆಯಲ್ಲಿ ಆ ಹುಡುಗ ಸ್ವರಗಳ ಜತೆ ಬೆಳೆಯಲಾರಂಭಿಸಿದ.
ನಾಲ್ಕು ವರ್ಷದವನಿದ್ದಾಗ ಒಮ್ಮೆ ಶೇಖರ್ ಮಗನನ್ನು ಖ್ಯಾತ ಸಂಗೀತ ನಿರ್ದೇಶಕ ಸುದರ್ಶನ್ ಬಳಿ ಕರೆದೊಯ್ದಿದ್ದರು. ಅವರು ಆಗಲೇ ಶೇಖರ್ ಪುತ್ರನ ಬಗ್ಗೆ ಕೇಳಿ ತಿಳಿದಿದ್ದರು. ಪುಟ್ಟ ಹುಡುಗನನ್ನು ನೋಡುತ್ತಿದ್ದಂತೆಯೇ ಶೇಖರ್ಗೆ ‘ನಿನ್ನ ಮಗ ಯಾವ ವಾದ್ಯವನ್ನಾದರೂ ನುಡಿಸಬಲ್ಲನಂತೆ. ಎಲ್ಲಿ ನೋಡೇ ಬಿಡೋಣ’ ಎಂದು ಹಾರ್ಮೋನಿಯಂನಲ್ಲಿ ಅತ್ಯಂತ ಕ್ಲಿಷ್ಟವಾದ ರಾಗವನ್ನು ನುಡಿಸಿದರು. ಹಾರ್ಮೋನಿಯಂ ಅನ್ನು ಮುಚ್ಚಿ ಹುಡುಗನತ್ತ ಸರಿಸಿದರು. ಶೇಖರ್ ಆತಂಕದಲ್ಲಿ ಮಗನತ್ತ ನೋಡಿದರು. ಆತ ಒಂದಿಷ್ಟೂ ಆತಂಕವಿಲ್ಲದೆ ಸುದರ್ಶನ್ರಂತೆ ನುಡಿಸಿ ಅಲ್ಲಿದ್ದವರನ್ನೆಲ್ಲಾ ಬೆರಗಾಗಿಸಿಬಿಟ್ಟ. Read the rest of this entry »
ನಿಶಾಂತ್-ಶ್ಯಾಂ ಬೆನಗಲ್ ರ ಒಂದು ಕಲಾಕೃತಿ
ರವಿರಾಜ್ ಗಲಗಲಿ ಬರೆದ ನಿಶಾಂತ್ ಸಿನಿಮಾದ ಬರಹವಿದು. ಶ್ಯಾಂ ಬೆನಗಲ್ ನಿರ್ದೇಶಿಸಿದ್ದ ಚಿತ್ರ, ಗೋವಿಂದ ನಿಹಲಾನಿಯವರ ಛಾಯಾಗ್ರಹಣ. ಒಂದು ಅದ್ಭುತ ಚಿತ್ರದ ಬಗೆಗಿನ ಲೇಖನವಿದು.
ಆ ಪುಟ್ಟ ಹಳ್ಳಿಯಲ್ಲಿ ಮೌನವೇ ಸರ್ವತ್ರ ಸಾಧನ, ಮೌನವೇ ಭಾಷೆ, ಮೌನದ್ದೇ ಸಂವಹನ. ಗ್ರಾಮದ ಜಮೀನ್ದಾರ ಸಹೋದರರು ನಡೆಸುವ ದೌರ್ಜನ್ಯ, ಅತ್ಯಾಚಾರಕ್ಕೆ ಮೌನವೇ ಉತ್ತರ. ಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್ 1976 ರಲ್ಲಿ ನಿರ್ದೇಶಿಸಿದ ನಿಶಾಂತ್ ಚಿತ್ರದ ಒನ್ ಲೈನ್ ಕತೆಯಿದು.
ನಿಶಾಂತ್ ಅರ್ಥಾತ್ ರಾತ್ರಿಯ ಕೊನೆ, ಚಿತ್ರದಲ್ಲೆಲ್ಲ ಕತ್ತಲೆ ಬೆಳಕಿನ ಆಟವನ್ನಾಡಿದ್ದಾರೆ ಶ್ಯಾಂ. 1945 ರಲ್ಲಿ ಆಂಧ್ರ ಪ್ರದೇಶದ ಗ್ರಾಮವೊಂದರಲ್ಲಿ ನಡೆಯುವ ಜಮೀನ್ದಾರರ ದೌರ್ಜನ್ಯ ಇಲ್ಲಿ ಕತೆಯಾಗಿದೆ. ಆ ಹಳ್ಳಿಯಲ್ಲಿ ಜಮೀನ್ದಾರರು ಹೇಳಿದ್ದೆ ಮಾತು, ಆಡಿದ್ದೇ ಆಟ. ಹಿರಿಯಣ್ಣ ಹಾಗೂ ಇಬ್ಬರು ಸಹೋದರರ ಜಮೀನ್ದಾರರ ಕುಟುಂಬ ಅಕ್ಷರಶ: ಹಳ್ಳಿಯನ್ನು ನರಕವಾಗಿಸುತ್ತಾರೆ. ಸಂತೆಯಲ್ಲಿ ಕೋಳಿ ಮಾರುವವಳ ಬುಟ್ಟಿಗೆ ಜಮೀನ್ದಾರರ ಸಹೋದರರು ಕೈ ಹಾಕಿದರೆ ಬುಟ್ಟಿಯಲ್ಲಿನ ಕೋಳಿಗಳು ಅವರ ಹೊಟ್ಟೆ ಹಸಿವು ತಣಿಸಿದರೆ, ಕೋಳಿ ಮಾರುವಾಕೆ ದೇಹದ ಹಸಿವು ಪೂರೈಸಬೇಕು. ಹಿರಿಯಣ್ಣ (ಅಮರೀಶ್ ಪುರಿ), ಕಿರಿಯವ (ಡಾ.ಮೋಹನ್ ಅಗಾಸೆ), ಚಿಕ್ಕ ಸಹೋದರ (ಅನಂತ್ ನಾಗ್) ಸುತ್ತ ಚಿತ್ರದ ಕತೆ ಸುತ್ತುತ್ತದೆ. Read the rest of this entry »
ಯುಗಾದಿಗೆ ಸಾಂಗತ್ಯ ಮ್ಯಾಗಜೈನ್
ಗೆಳೆಯರೇ, ಸಾಂಗತ್ಯ ಹೊಸ ಸಾಹಸಕ್ಕೆ ಕೈ ಹಾಕಲೊರಟಿರುವುದು ತಮಗೇ ತಿಳಿದೇ ಇದೆ. ಸಾಂಗತ್ಯ ಮ್ಯಾಗಜೈನ್ ಬಗ್ಗೆ ಇಲ್ಲಿ ಪ್ರಕಟಿಸಿ ಸಲಹೆಯನ್ನೂ ಕೇಳಿದ್ದೆವು. ಕೆಲವರು ಮ್ಯಾಗಜೈನ್ ಅಗತ್ಯವಿಲ್ಲ ಎಂದು ಹೇಳಿದರೆ, ಇನ್ನು ಕೆಲವರು ತನ್ನಿ, ಒಳ್ಳೆಯದು ಎಂದರು. ಜತೆಗೆ ಆರ್ಥಿಕ ನೆಲೆ ಕುರಿತೂ ಸಲಹೆ ನೀಡಿದರು.
ಎಲ್ಲದಕ್ಕೂ ಧನ್ಯವಾದಗಳು. ಈಗಾಗಲೇ ಲೆಕ್ಕಾಚಾರ ಮುಗಿದಿದೆ ಆರ್ಥಿಕ ನೆಲೆಯದ್ದು. ಇನ್ನು ಸಂಪನ್ಮೂಲ ವ್ಯಕ್ತಿಗಳ ಲೆಕ್ಕಾಚಾರ ಆರಂಭವಾಗಿದೆ. ಒಂದು ಮ್ಯಾಗಜೈನ್ ಎಷ್ಟು ಚೆನ್ನಾಗಿ ತರಬಹುದೆಂಬ ಲೆಕ್ಕಾಚಾರವೂ ಪ್ರಾರಂಭವಾಗಿದೆ. ವಿನ್ಯಾಸ, ಹೂರಣ ಎಲ್ಲದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಈ ಬಗ್ಗೆಯೂ ನಿಮ್ಮ ಸಲಹೆಗಳಿದ್ದರೆ saangatyamagazine@gmail.com ಗೆ ಕಳುಹಿಸಬಹುದು. ನಿಮ್ಮಲ್ಲಿ ಏನಾದರೂ ಮಾದರಿಗಳಿದ್ದರೆ ಅದನ್ನೂ ಕಳಿಸಬಹುದು.
ಎಲ್ಲ ಲೆಕ್ಕಾಚಾರ ಸರಿ ಹೋಗುತ್ತದೆ ಅನ್ನಿ. ಸರಿ ಹೋದರೆ ಯುಗಾದಿಗೆ ನಮ್ಮ ಮ್ಯಾಗಜೈನ್ ಬಿಡುಗಡೆಗೆ ಸಿದ್ಧವಾಗಲಿದೆ. ಅಂದರೆ ಅಂದು ನಿಮಗೆ ಲಭ್ಯ. ಆಸಕ್ತರಿಗೆ ಹೇಗೆ ಮುಟ್ಟಿಸಬೇಕೆಂಬ ಯೋಜನೆಯೂ ನಡೆಯುತ್ತಿದೆ. ನಿಮ್ಮಲ್ಲಿ ಏನಾದರೂ ಹೊಸ ಐಡಿಯಾ ಇದ್ದರೆ ಹೇಳಿ. ಚಂದಾದಾರರನ್ನು ಆಶ್ರಯಿಸುವುದು ಇದ್ದೇ ಇದೆ. ಜತೆಜತೆಗೆ ಮಾರುಕಟ್ಟೆಯತ್ತಲೂ ಮುಖ ಮಾಡಲಿದೆ ಸಾಂಗತ್ಯ.
ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ರೂಪಿಸಬೇಕೆಂದು ಹೊರಟಿದೆ ಸಾಂಗತ್ಯ ಬಳಗ. ನಿಮ್ಮೆಲ್ಲರ ಬೆಂಬಲವಿದೆಯೆಂಬ ಭರವಸೆಯೇ ಇಂಥದೊಂದು ಸಾಹಸಕ್ಕೆ ಮುನ್ನುಗ್ಗುವಂತೆ ಮಾಡಿರುವುದು. ಈ ಮಾತು ಖಂಡಿತಾ ಅತಿಶಯೋಕ್ತಿಯದ್ದಲ್ಲ.
ಕಾರಣ, ಸಾಂಗತ್ಯ ಜನವರಿ 3 ರಂದು 2009 ರಲ್ಲಿ ಸಮೂಹ ಬ್ಲಾಗ್ ಆರಂಭವಾದಾಗಲೂ ಬಹಳಷ್ಟು ಮಂದಿ ಒಂದು ತಿಂಗಳು ಅಪ್ ಟು ಡೇಟ್ ಆಗಬಹುದು, ನಂತರ ಅಷ್ಟಕಷ್ಟೇ ಎಂದು ಊಹಿಸಿದ್ದರು. ಎಲ್ಲರ ಸಹಕಾರದಿಂದ ಆ ಊಹೆ ಸುಳ್ಳಾಗಿದೆ. ಸುಮಾರು ಹತ್ತು ತಿಂಗಳಿಂದ ತಿಂಗಳಿಗೆ ಕನಿಷ್ಠ 15 ಒಳ್ಳೆಯ ಲೇಖನಗಳನ್ನು ಪ್ರಕಟಿಸುತ್ತಿದೆ. ನಿತ್ಯವೂ ಒಂದು ಹೊಸ ಲೇಖನ ಪ್ರಕಟಿಸಬೇಕೆಂಬ ಇಚ್ಛೆ ಇದೆ. ಅದಕ್ಕೆ ಬರೆದುಕೊಡುವವರ ಸಂಖ್ಯೆಯೂ ಜಾಸ್ತಿ ಆಗಬೇಕಿದೆ. ಸಾಂಗತ್ಯ ಆ ದಿಕ್ಕಿನತ್ತಲೇ ಮುಖ ಮಾಡಿದೆ.
ಈ ಮಧ್ಯೆ ಎಂದಿನಂತೆ ಜನವರಿಯಲ್ಲಿ ಮೂರನೇ ಚಿತ್ರೋತ್ಸವಕ್ಕೆ ತಣ್ಣಗೆ ಆಲೋಚನೆ ಶುರುವಾಗಿದೆ. ಬಹಳ ವಿಭಿನ್ನವಾಗಿ ಮಾಡಬೇಕೆಂಬ ಆಸೆಯೂ ಇದೆ. ಅದಕ್ಕೆ ನಿಮ್ಮೆಲ್ಲರ ಲೆಕ್ಕಾಚಾರವೂ ಸೇರಿದರೆ ಅನುಕೂಲ.ನಮ್ಮ ಹೊಸ ಸಾಹಸವನ್ನು ಬೆಂಬಲಿಸಿ, ಲೇಖನ ಕಳಿಸಿ.
“ಸಂಸಾರ”ದ ಸುತ್ತ ಮುತ್ತ
“………. There are things we must unlearn inorder to learn………. There are things we must own to renounce them”…ಚೇತನಾ ತೀರ್ಥಹಳ್ಳಿಯವರು ಟಿಬೆಟಿಯನ್ ಸಿನಿಮಾ “ಸಂಸಾರ್’ ಕುರಿತು ಬರೆದ ಬರಹವಿದು.
ತಾಶಿ ಎಂಬ ಶಿಷ್ಯ ವಾದ ಹೂಡುತ್ತಾನೆ. ಹೀಗೆ ತ್ಯಜಿಸಬೇಕಾದ ವಸ್ತುಗಳನ್ನ ಗಳಸಿಕೊಳ್ಳಲೆಂದೇ ‘ಬುದ್ಧ ವಿಹಾರ’ ಬಿಟ್ಟು ಹೊರಡ್ತಾನೆ.
ಕಾಲಕ್ಕೆ ಸದಾ ಓಡುವ ಕಾಲು.
ಎಷ್ಟು ಬೇಗ ಪ್ರಣಯದಾಟ, ಒದೆತ, ಮದುವೆ, ಮಗು, ವ್ಯಾಪಾರ, ವಿದ್ರೋಹ, ಹೊಡೆದಾಟಗಳು ಮುಗಿದುಹೋದವು?
ಇತ್ತ ಬುದ್ಧವಿಹಾರದಲ್ಲೂ ನಡೆದಿದ್ದಾಆನೆ ಕಾಲ. ಮುಖ್ಯಸ್ಥ ಆಪೋ ನಿರ್ವಾಣ ಪಡೆಯುತ್ತಾನೆ. ಸಮಾಧಿಗೇರುವ ಮುನ್ನ ಮತ್ತೊಬ್ಬ ಶಿಷ್ಯನ ಕೈಲಿ ತಾಶಿಗಾಗಿ ಪತ್ರ ಕೊಡುತ್ತಾನೆ. ಈ ಪತ್ರ, ಕಾಮದ ಹಸಿವನ್ನೆ ಉಣ್ಣುತ್ತ, ಸಂಸಾರದ ನಿಭಾವಣೆಯಲ್ಲಿ ಹೈರಾಣಾಗುತ್ತ ಗೊಂದಲಗೊಳ್ಳುತ್ತಿದ್ದ ತಾಶಿಯನ್ನ ಕೇಳುತ್ತೆ- ” What is more important? To satisfy one thousand desires, or to conquer just one?” Read the rest of this entry »
ಸದಭಿರುಚಿಯ ಚಲನಚಿತ್ರಗಳ ಮಾರುಕಟ್ಟೆ-ಗುಲ್ಬರ್ಗ ಫಿಲ್ಮ್ ಕ್ಲಬ್ ಯತ್ನ
ಸದಭಿರುಚಿಯ ಚಿತ್ರಗಳನ್ನು ಜನರಿಗೆ ಮುಟ್ಟಿಸಲು ಸಮುದಾಯ ಅ. 30 ರಿಂದ ನ. 5 ರವರೆಗೆ ಬೆಂಗಳೂರಿನಲ್ಲಿ ಚಲನಚಿತ್ರೋತ್ಸವ ಸಂಘಟಿಸುತ್ತಿದೆ. ಅರ್ಥ, ಗುಬ್ಬಚ್ಚಿಗಳು, ಬನದ ನೆರಳು, ದಾಟು ಚಿತ್ರಗಳು ಪ್ರದರ್ಶನಗೊಳ್ಳುವಂಥವು. ಈ ಹಿನ್ನೆಲೆಯಲ್ಲಿ ಸದಭಿರುಚಿಯ ಚಲನಚಿತ್ರ ಮಾರುಕಟ್ಟೆ ಹಾಗೂ ಆ ನಿಟ್ಟಿನಲ್ಲಿ ಫಿಲ್ಮ್ ಕ್ಲಬ್ ಗಳ ಪ್ರಯತ್ನದ ನೆಲೆಯಲ್ಲಿ ಬಿ. ಸುರೇಶರು ಬರೆದ ಲೇಖನವಿದು. ಒಂದು ಒಳ್ಳೆಯ ಚರ್ಚೆಗೆ ವೇದಿಕೆಯಾಗುವಂಥದ್ದು. ನಿಮ್ಮ ಅಭಿಪ್ರಾಯವನ್ನು saangatya@gmail.com ಗೆ ಕಳಿಸಿ.
ಚಲನಚಿತ್ರಕ್ಕೆ ನೂರಾಹತ್ತುವರ್ಷಗಳ ಇತಿಹಾಸವಿದೆ. ಆದರೆ ಸದಭಿರುಚಿಯ ಚಿಂತನೆಗೆ ಇರುವುದು ಸಾವಿರಾರು ವರುಷಗಳ ಇತಿಹಾಸ. ಮನುಷ್ಯನಿಗೆ ನಾಗರೀಕತೆ ಎಂಬುದನ್ನು ಒದಗಿಸಿಕೊಟ್ಟದ್ದೆ ಸಾಮಾಜಿಕ ಎಚ್ಚರವುಳ್ಳ ಸದಭಿರುಚಿಯ ಚಿಂತಕರು. ಹೀಗಾಗಿ ಸದಭಿರುಚಿ ಎಂಬುದು ಮಾನವ ಇತಿಹಾಸದ ಜೊತೆಗೇ ತಳುಕು ಹಾಕಿಕೊಂಡಂತಹ ಸುದೀರ್ಘ ಸತ್ಯ. ಕಾಲದಿಂದ ಕಾಲಕ್ಕೆ ಈ ಸದಭಿರುಚಿಯ ಚಿಂತನೆಯಲ್ಲಿ ಪಲ್ಲಟಗಳಾಗಿವೆ. ಅದು ಅತ್ಯಂತ ಸಹಜ. ಏಕೆಂದರೆ, ಯಾವುದನ್ನು ಬುದ್ಧಿವಂತರು ಒಂದು ಸೂತ್ರವಾಗಿ ಸೂಚಿಸುತ್ತಾರೋ ಅದು ಕಾಲಾನುಕ್ರಮದಲ್ಲಿ ವ್ಯಾಪಾರಿಗಳ ಕೈಗೆ ಸಿಕ್ಕು ಜನಪ್ರಿಯತೆಯ ಹಣೆಪಟ್ಟಿಯನ್ನು ಪಡೆದುಕೊಂಡು ಬಿಡುತ್ತದೆ.
ಇದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಒಂದೊಮ್ಮೆ ಹೊಸಅಲೆಯ ಚಿತ್ರ ತಯಾರಕರು ಮಾಡಿದ ವಾಸ್ತವವಾದಿ ಪ್ರಯೋಗಗಳು (ನಿಹಲಾನಿ ಅವರ `ಅರ್ಧಸತ್ಯ’, `ಆಕ್ರೋಶ್’ ಶ್ಯಾಮ್ ಬೆನಗಲ್ ಅವರ `ಅಂಕುರ್’, `ಮಂಥನ್’) ನಂತರದ ದಿನಗಳಲ್ಲಿ ಪ್ರಧಾನವಾಹಿನಿಯ ಚಿತ್ರರಂಗದ ಪ್ರಧಾನ ಅಸ್ತ್ರವಾದುದನ್ನು (ರಾಮಗೋಪಲ್ ವರ್ಮ ಅವರ ಎಲ್ಲಾ ಚಿತ್ರಗಳು) ನಾವೆಲ್ಲರೂ ನೋಡಿದ್ದೇವೆ. (ಇದು ಕನ್ನಡದ ಸಂದರ್ಭದಲ್ಲಿಯೂ ಆಗಿದೆ. ಸದಭಿರುಚಿಯ ಸಿನೆಮಾಗಳ ಪ್ರಭಾವದಿಂದಲೇ ಸುನೀಲ್ ಕುಮಾರ್ ದೇಸಾಯ್ ಮತ್ತು ಕಾಶೀನಾಥ್ ರಂತಹ ಚಿತ್ರನಿರ್ದೇಶಕರು ಪ್ರಧಾನ ವಾಹಿನಿಯಲ್ಲಿ ಗುರುತಿಸಿಕೊಂಡದ್ದನ್ನ ಗಮನಿಸಬಹುದು.) ಹಾಗೇ ನೋಡಿದರೆ ನಮ್ಮ ಪ್ರಧಾನವಾಹಿನಿ ಚಿತ್ರರಂಗದಲ್ಲಿ ಇದ್ದಂತಹ ಅತಿರೇಕಿತ ವಾಸ್ತವವಾದಿ ನಿರೂಪಣೆಯನ್ನ (ಇದನ್ನು ಡ್ರಾಮ್ಯಾಟಿಕ್ ಎನ್ನಬಹುದು. ಏಕೆಂದರೆ ಆರಂಭಕಾಲದ ಟಾಕಿ ಚಿತ್ರಗಳು ಬಳಸಿಕೊಂಡದ್ದು ಆಗ ಪ್ರಚಲಿತವು, ಪ್ರಖ್ಯಾತವು ಆಗಿದ್ದ ಕಂಪೆನಿ ಥಿಯೇಟರ್ ಗಳ ನಿರೂಪಣಾ ಕ್ರಮವನ್ನ. ವಿವರಗಳಿಗೆ ಇದೇ ಲೇಖಕರ `ಬೆಳ್ಳಿಅಂಕ’ ದ ಸಂಕಲನ ಕಲೆ ಲೇಖನವನ್ನು ಗಮನಿಸಬಹುದು.) ಇದನ್ನು ಸಹಜ ವಾಸ್ತವದ ಕಡೆಗೆ ತಿರುಗುವಂತೆ ಮಾಡಿದ್ದು ಸದಭಿರುಚಿಯ ಚಿತ್ರ ಚಿಂತಕರು. (ಎನ್.ಲಕ್ಷ್ಮೀನಾರಾಯಣ್ ಅವರ `ಉಯ್ಯಾಲೆ’, `ನಾಂದಿ’ ಮತ್ತು ಎಂ.ಆರ್.ವಿಠಲ್ ಅವರ `ಮಿಸ್.ಲೀಲಾವತಿ’ಯಂತಹ ಚಿತ್ರಗಳ ಪ್ರಭಾವ ನೇರವಾಗಿ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳ ಮೇಲೆ ಆಗಿರುವುದನ್ನ ಚಿತ್ರದ ನಿರೂಪಣಾ ಶೈಲಿಯ ದೃಷ್ಟಿಯಿಂದ `ಬೆಳ್ಳಿಮೋಡ’, `ಗೆಜ್ಜೆಪೂಜೆ’ಯಲ್ಲಿ ಗಮನಿಸಬಹುದು.) ಈ ದೃಷ್ಟಿಕೋನದಿಂದ ಗಮನಿಸುವುದಾದರೆ ಸದಭಿರುಚಿ ಎಂಬುದು ಕಾಲದಿಂದ ಕಾಲಕ್ಕೆ ತನ್ನ ಆಕಾರ-ಸ್ವರೂಪ-ವಿನ್ಯಾಸವನ್ನ ಬದಲಿಸಿಕೊಳ್ಳುತ್ತ ಮತ್ತು ತನ್ನದನ್ನ ಇತರರಿಗೆ ಹಂಚುತ್ತಾ ಸಾಗಿ ಬಂದಿದೆ. ಇದನ್ನ ನಾನು `ಅಂಗಿ ಬದಲಿಸುವ ಪ್ರಕ್ರಿಯೆ’ ಎನ್ನುತ್ತೇನೆ. ಇದು ಜನಪ್ರಿಯ ಮೌಲ್ಯಗಳ ವಿರುದ್ಧ ಸದಾ ಈಸುವಂತಹ-ಜೀವಿಸುವಂತಹ ಎಚ್ಚರದ ಗಂಟೆ! ಇದರಿಂದಾಗಿಯೇ ಸದಭಿರುಚಿ ಎಂಬುದು ಎಲ್ಲಾ ಕಾಲದಲ್ಲೂ ಪ್ರಧಾನವಾಹಿನಿಯಿಂದ `ಹೊರಗೆ’ ನಿಂತು ಹೊಸದನ್ನು ಹುಡುಕುವ ಯತ್ನ ಮಾಡುತ್ತಿರುತ್ತದೆ. (ಈ ನನ್ನ ಲೇಖನದ ಉದ್ದಕ್ಕೂ ನಾನು ಈ `ಅಂಗಿ ಬದಲಿಸುವ’ ಮತ್ತು `ಹೊರಗೆ’ ಉಳಿಯುವ ವಿವರಗಳನ್ನು ಆಗಾಗ ಹೇಳುತ್ತೇನೆ.) Read the rest of this entry »
ಅ.30 ರಿಂದ ವಾರಪೂರ್ತಿ ಚಿತ್ರೋತ್ಸವ-ನಿಜವಾದ ರಾಜ್ಯೋತ್ಸವ
ಸಮುದಾಯ ಬೆಂಗಳೂರಿನಲ್ಲಿ ಅ. 30 ರಿಂದ ನ. 5 ರವರೆಗೆ ಚಿತ್ರೋತ್ಸವ ಏರ್ಪಡಿಸಿದೆ. ಮಾಹಿತಿ ಹಾಗೂ ಇತರೆ ವಿವರಗಳಿಗೆ ಎಸ್. ಜಿ. ಸಿದ್ದರಾಮಯ್ಯ-94489 49737, ರವೀಂದ್ರ ಸಿರಿವರ- 98441 09706.
ಸಮುದಾಯ ಸಹಕಾರಿ ತತ್ವದಡಿ ಅ. 30 ರಿಂದ ನ. 5 ರವರೆಗೆ ಬೆಂಗಳೂರಿನ ಕೈಲಾಶ್ ಚಿತ್ರಮಂದಿರದಲ್ಲಿ ಚಿತ್ರೋತ್ಸವ ಏರ್ಪಡಿಸಿದೆ.
ಅಭಯಸಿಂಹರ ”ಗುಬ್ಬಚ್ಚಿಗಳು”, ಬಿ. ಸುರೇಶರ “ಅರ್ಥ”, ಕೆ. ಶಿವರುದ್ರಯ್ಯನವರ “ದಾಟು” ಹಾಗೂ ಉಮಾಶಂಕರ ಸ್ವಾಮಿಯವರ “ಬನದ ನೆರಳು” ಚಿತ್ರಗಳು ವಿವಿಧ ಷೋಗಳಲ್ಲಿ ಪ್ರದರ್ಶನಗೊಳ್ಳಲಿವೆ.
ಸಮುದಾಯ ತನ್ನ ಹೊಸ ವಿಸ್ತರಣೆಯ ಚಟುವಟಿಕೆಯಾಗಿ ಚಿತ್ರೋತ್ಸವ ಸಂಘಟನೆಯತ್ತ ಹೊರಟಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ನಡೆಯಲಿದ್ದು, ನಂತರ ತನ್ನ ಘಟಕಗಳಿರುವೆಡೆ ಚಿತ್ರೋತ್ಸವ ಸಂಘಟಿಸಲಿದೆ.
ಈ ವಿಷಯವನ್ನು ಸಾಂಗತ್ಯಕ್ಕೆ ತಿಳಿಸಿದ ಸಮುದಾಯ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ, “ಈಗಾಗಲೇ ಚಿತ್ರೋತ್ಸವ ಸಂಘಟನೆ ಆರಂಭವಾಗಿದೆ. ತುಮಕೂರು ಸೇರಿದಂತೆ ರಾಜ್ಯಾದ್ಯಂತ 27 ಕಡೆ ನಮ್ಮ ಘಟಕಗಳಿದ್ದು, ಅಲ್ಲೆಲ್ಲ ಸ್ಥಳೀಯರ ಸಹಕಾರದಿಂದ ಚಿತ್ರೋತ್ಸವ ಸಂಘಟಿಸಲಾಗುವುದು. ಒಳ್ಳೆಯ ಚಿತ್ರಗಳನ್ನು ಜನ ಸಮುದಾಯಕ್ಕೆ ತಲುಪಿಸಬೇಕೆಂಬುದೇ ಉದ್ದೇಶ’ ಎಂದರು. Read the rest of this entry »
ನಗುವ ಕಡಲೊಳು ತೇಲಿ ಬರುತಲಿದೆ ಒಡೆದ ಹಾಯಿ ದೋಣಿ
ನಮ್ಮ ಒಂದೇ ಚಿತ್ರ ನೂರಾರು ನೋಟಕ್ಕೆ ಈ ಬಾರಿ ಗುಲಾಬಿ ಟಾಕೀಸ್ ನ ಬಗ್ಗೆ ಬರೆದ ಸುಧನ್ನ ದೇರಾಜೆ ಅವರ ಬರಹವನ್ನು ಇಲ್ಲಿ ಹಾಕಲಾಗಿದೆ. ಒಂದೇ ಚಿತ್ರದ ಬಗೆಗಿನ ಹಲವಾರು ನೆಲೆಗಳನ್ನು ಒಂದೇ ಕಡೆ ಒದಗಿಸುವುದು ಸಾಂಗತ್ಯದ ಉದ್ದೇಶವೂ ಹೌದು. ಈ ನಿಟ್ಟಿನಲ್ಲಿ ಈ ಬರಹ, ಓದಿ ಹೇಳಿ.
ಇದು ಕಾಸರವಳ್ಳಿ ಟಾಕೀಸ್. ಈ ಬಾರಿ ಇಲ್ಲಿ ಅರಳಿರುವ ಗುಲಾಬಿಗೆ ಅತ್ತರಿನ ವಾಸನೆಯೂ ಇದೆ, ನೆತ್ತರಿನ ವಾಸನೆಯೂ ಇದೆ. ಅವುಗಳ ಮಧ್ಯೆ ಅಂಬಿಗರು ‘ಹುಟ್ಟು ಹಾಕುವ’ ಪ್ರಶ್ನೆಗಳಲ್ಲಿ ಮತ್ಸ್ಯಗಂಧಿಯರೂ ಇದ್ದಾರೆ. ಹಳೆಯ ಚಿತ್ರಗಳಿಗಿಂತ ವೇಗವಾದ ಗತಿಯಿದೆ. ಪಾತ್ರಧಾರಿಗಳು-ಜನರ ನಡುವಿನ ಭೇದವೇ ಪ್ರೇಕ್ಷಕರಿಗೆ ತಿಳಿಯದಷ್ಟು ಹೊರಾಂಗಣದಲ್ಲಿ ದೃಶ್ಯಗಳು ತನ್ಮಯವಾಗಿವೆ.
***
ಒಂದೊಂದೂ ಬಣ್ಣದ ನೀರಿನಲ್ಲಿ ಅದ್ದಿ ತೆಗೆದು ಹೀಗೆ ತೋರಿಸುವುದು ಸುಲಭವಾಗಿದ್ದರೆ ಕನ್ನಡದ ಮತ್ತೊಬ್ಬ ನಿರ್ದೇಶಕನಾದರೂ ಅದನ್ನು ಮಾಡಬಹುದಾಗಿತ್ತು. ದರ್ಶನ್, ಗಣೇಶ್, ಉಪೇಂದ್ರ ಮತ್ತಿತರರ ಇಮೇಜ್ಗೆ ಸರಿಯಾಗಿ ಸಿನಿಮಾ ಮಾಡುವುದು ಹಲವು ನಿರ್ದೇಶಕರಿಗೆ ಗೊತ್ತು. ಆದರೆ ಕತೆಯ ಇಮೇಜ್ಗೆ ಸರಿಯಾಗಿ ಸಿನಿಮಾ ಮಾಡುವುದು ಗಿರೀಶ್ ಕಾಸರವಳ್ಳಿಯವರಿಗೆ ಗೊತ್ತು . ‘ನೀವು ನೋಡಲಿ ಎಂದು ಸಿನಿಮಾ ಮಾಡುವುದಿಲ್ಲ, ಮಾಡುವುದು ಅನಿವಾರ್ಯ ಕರ್ಮ ಎನಗೆ ‘-ಎಂಬಂತಿರುತ್ತದೆ ಕಾಸರವಳ್ಳಿ ಧಾಟಿ ! ಆದರೆ ಅವರು ಹೋಗುತ್ತಾರೆ ಅದನ್ನು ದಾಟಿ. Read the rest of this entry »
ಬೆಳಕಿಗೆ ಭಾಷ್ಯ ಬರೆದವರಲ್ಲ ; ಭಾಷೆ ಬರೆದವರು ಭಾಸ್ಕರ್ !
ಜಿ.ಎಸ್. ಭಾಸ್ಕರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ಒಳ್ಳೆಯ ಛಾಯಾಗ್ರಾಹಕರು. ಬೆಳಕಿನ ಸಾಧ್ಯತೆಯನ್ನು ದುಡಿಸಿಕೊಳ್ಳುತ್ತಾ ಚಿತ್ರದ ಸನ್ನಿವೇಶಗಳಿಗೆ ಅರ್ಥ ಕಲ್ಪಿಸುವ ಬಗೆ ಅವರೊಳಗಿನದು. ಅನ್ವರ್ಥಕ ಎಂಬಂತೆ ತಮ್ಮೊಳಗೆ ಬೆಳಗುವ ಸೂರ್ಯನನ್ನು ಇಟ್ಟುಕೊಂಡು ಅವನನ್ನೇ ದುಡಿಸಿಕೊಂಡವರು ಎನ್ನುತ್ತಾರೆ ಪತ್ರಕರ್ತ ಮುರಳೀಧರ ಖಜಾನೆ.
ನನಗೆ ನೆನಪಿರುವಂತೆ 1992ರ ಸಂದರ್ಭ. ಪ್ರಸಿದ್ಧ ಚಿತ್ರ ನಿರ್ದೇಶಕಿ ಸಾಯಿ ಪರಾಂಜಪೆ ತಮ್ಮ “ಪಪೀಹಾ’ ಚಿತ್ರವನ್ನು ನಾಗಪುರ ಅರಣ್ಯ ಪ್ರದೇಶದಲ್ಲಿ ಚಿತ್ರಿಸಲು ಸಜ್ಜಾಗಿದ್ದರು. ತಂಡವೂ ಸಿದ್ಧವಾಗಿತ್ತು, ದುರದೃಷ್ಟವಶಾತ್, ಚಿತ್ರೀಕರಣ ಸ್ಥಳಕ್ಕೆ ಬರಬೇಕಿದ್ದ ಅವರ ಉಪಕರಣಗಳನ್ನು ಹೊತ್ತ ವಾಹನ ಅಪಘಾತಕ್ಕೆ ಒಳಗಾದ ಸುದ್ದಿ ಸಿಕ್ಕಿತು. ಯಾವುದೇ ಬದಲಿ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಗಳೇ ಇರಲಿಲ್ಲ. ಗುಡ್ಡಗಾಡು ಸಮುದಾಯದ ಕುರಿತಾದ ಚಿಕ್ಕ ಬಜೆಟ್ನ ಚಿತ್ರವದು. ಅಷ್ಟೇ ಅಲ್ಲ, ಚಿತ್ರದ ಕೆಲ ಭಾಗಗಳನ್ನು ಚಿತ್ರೀಕರಿಸಿ ಅದನ್ನು ಆಧರಿಸಿಯೇ ಚಿತ್ರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಉದ್ದೇಶ ಹೊಂದಿದ್ದರು.

ಸರಿ, ವಾಪಸು ಹೋಗುವಂತಿರಲಿಲ್ಲ. ಏನಾದರೂ ಆಗಲಿ ಎಂದು ಹೊಸ ಪ್ರಯತ್ನಕ್ಕೆ ಮುಂದಾದರು. ಅಲ್ಲೇ ಇದ್ದ ಯುವ ಕ್ಯಾಮೆರಾಮ್ಯಾನ್ಗೆ ಕರೆದು “ನಮ್ಮಲ್ಲಿ ಈಗ ಲಭ್ಯವಿರುವ ಉಪಕರಣಗಳಲ್ಲೇ ಚಿತ್ರೀಕರಣ ಶುರು ಮುಗಿಸೋಣ. ಒಂದುವೇಳೆ ಸಾಧ್ಯವಾಗದಿದ್ದರೆ ಈ ಯೋಜನೆಗೇ ಅಂತ್ಯ ಹಾಡೋಣ’ ಎಂದರು. ಈ ಯುವ ಕ್ಯಾಮೆರಾಮ್ಯಾನ್ ಇದ್ದ ಆಯ್ಕೆಗಳು ಎರಡೇ.
“ಇಲ್ಲ ರಿಸ್ಕ್ ತೆಗೆದುಕೊಂಡು ಚಿತ್ರೀಕರಣ ಮುಗಿಸಬೇಕು. ಇಲ್ಲವೇ ಇಡೀ ಯೋಜನೆ ಕೈ ಬಿಡಲು ಕಾರಣಕರ್ತನಾಗಬೇಕು’. ಆದರೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನ ಗರಡಿಯಲ್ಲಿ ತರಬೇತಾದ ಆ ಯುವಕ “ರಿಸ್ಕ್’ ತೆಗೆದುಕೊಳ್ಳಲು ನಿರ್ಧರಿಸಿದ. ಒಂದು ಪುಟ್ಟ ಲೈಟು ಮತ್ತು ಕೆಲವು ಥರ್ಮೋಕೋಲ್ ತುಂಡುಗಳನ್ನು ಬಳಸಿಕೊಂಡು ಚಿತ್ರೀಕರಣಕ್ಕೆ ಸಜ್ಜಾದ. ಅರಣ್ಯದಲ್ಲೇ ಪ್ರಕೃತಿ ದತ್ತವಾಗಿ ಲಭ್ಯವಾದ ಬೆಳಕಿನ ಸಾಧ್ಯತೆಯನ್ನೇ ದುಡಿಸಿಕೊಂಡು ಥರ್ಮೋಕೋಲ್ ಬಳಸಿಕೊಂಡು ಹಗಲಿನ ಬೆಳಕಿನ ವಿನ್ಯಾಸವನ್ನು ರೂಪಿಸಿಕೊಂಡ. ಮೂರು ಹಂತದಲ್ಲಿ ಒಂದೇ ಚಿತ್ರಿಕೆ (ಶಾಟ್) ಯನ್ನು ಚಿತ್ರೀಕರಿಸುವ ಸಂದರ್ಭದಲ್ಲಿ, ಈ ಪುಟ್ಟ ಲೈಟ್ ಸಹಾಯಕ್ಕೆ ಬಂದಿತು. ಹಲವು ಅಡ್ಡಿಗಳ ಮಧ್ಯೆಯೂ ಹೊಸದನ್ನು ಹುಡುಕಿಕೊಂಡ. ಪೆಟ್ರೋಮ್ಯಾಕ್ಸ್ ದೀಪಗಳನ್ನು ಬಳಸಿಕೊಂಡ…ಹೀಗೆ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ. Read the rest of this entry »
ಹಾಡು ಹಕ್ಕಿಯ ಹೃದಯಗೀತೆ ಮಂಗಳವಾರ ಬಿಡುಗಡೆ
ಬಹುಶಃ ಭಾರತೀಯ ಚಿತ್ರರಂಗದ ಗಾನಕೋಗಿಲೆ ಲತಾ ಮಂಗೇಶ್ವರರ ಬಗ್ಗೆ ಕನ್ನಡದಲ್ಲಿ ಬರುತ್ತಿರುವ ಮೊದಲ ಪುಸ್ತಕ ಇದು ಇರಬೇಕು.
ವಿಜಯ ಕರ್ನಾಟಕದ ಸುದ್ದಿ ಸಂಪಾದಕ ವಸಂತ ನಾಡಿಗೇರರು ಬರೆದ “ಹಾಡುಹಕ್ಕಿಯ ಹೃದಯಗೀತೆ” ಮಂಗಳವಾರ (ಅ.27) ಸಂಜೆ 6 ಕ್ಕೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕೆಇಬಿಯ ಭವನದ ಸರ್.ಎಂ.ವಿ. ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.
ಗಾಯನ ಕ್ಷೇತ್ರದ ಮತ್ತೊಬ್ಬ ಧ್ರುವತಾರೆ ಎಸ್. ಪಿ. ಬಾಲಸುಬ್ರಹ್ಮಣ್ಯಂ ಕೃತಿಯನ್ನು ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ನಟಿ ಹಾಗೂ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷೆ ಜಯಮಾಲಾ, ನಟ ರಮೇಶ್ ಅರವಿಂದ್ ಭಾಗವಹಿಸುವರು. ವಿಜಯ ಕರ್ನಾಟಕದ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸುವರು.
ವಸಂತ ನಾಡಿಗೇರರು, ವಿಜಯ ಕರ್ನಾಟಕದ ಸಿನಿಮಾ ಪುರವಣಿಯಲ್ಲಿ ಬರೆದ ಬರಹಗಳಿವು. ಗಾನ ಕೋಗಿಲೆಯ ಜೀವನ ಚರಿತ್ರೆ ಕುರಿತು ಬರಿದೇ ಮಾಹಿತಿಯಲ್ಲ ; ಒಂದು ಒಳ್ಳೆಯ ಅನುಭವದಂತೆ ಕಟ್ಟಿಕೊಟ್ಟಿದ್ದಾರೆ.
ಕೃತಿ ಬಿಡುಗಡೆಗೆ ಎಲ್ಲರಿಗೂ ಸ್ವಾಗತಿಸಿದ್ದಾರೆ ಲೇಖಕರು. ಸ್ಥಳ : ಸರ್.ಎಂ.ವಿ ಭವನ, ಕೆಇಬಿ ಸಂಘ ಕಟ್ಟಡ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು. ಕೃತಿ ಬಿಡುಗಡೆಯ ನಂತರ ಲೇಖಕರಿಗೆ ಶುಭಾಶಯ ಹೇಳಿ : 93431 09195.




