ಸ್ಲಂಡಾಗ್ ಮಿಲಿನೇರ್ ಕುರಿತ ಚರ್ಚೆಯನ್ನು ಬೇಳೂರು ಸುದರ್ಶನರ ಬರಹದ ಮೂಲಕ ಮುಂದುವರಿಸಿದ್ದೇವೆ. ಒಬ್ಬೊಬ್ಬರು ಒಂದೊಂದು ಹೊಸ ನೋಟವನ್ನು ಹರಿಸುತ್ತಿದ್ದಾರೆ. ಅವರ ಬರಹದ ಸ್ವಲ್ಪ ಭಾಗವನ್ನು ಸಾಂಗತ್ಯದಲ್ಲಿ ಹಾಕಿದ್ದೇವೆ. ಪೂರ್ಣ ಬರಹಕ್ಕೆ ಅವರ ವೆಬ್ ಪೇಜ್ ಗೆ ಸಂಪರ್ಕ ಕಲ್ಪಿಸಲಾಗಿದೆ.
*
ಸ್ಲಮ್ಡಾಗ್ ಮಿಲೆಯನೇರ್ ಸಿನೆಮಾ ಒಳ್ಳೆಯದೋ, ಕೆಟ್ಟದ್ದೋ?
ಎ ಆರ್ ರಹಮಾನ್ಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಿದ್ದಕ್ಕೆ ಖುಷಿಪಡಬೇಕೋ, ಬೇಜಾರು ಮಾಡಿಕೊಳ್ಳಬೇಕೋ? ದಿ ವೈಟ್ ಟೈಗರ್ ಕಾದಂಬರಿಯನ್ನು ಹೊಗಳಬೇಕೋ, ತೆಗಳಬೇಕೋ?
ಭಾರತ ಬರೀ ದರಿದ್ರರ ದೇಶ ಎಂದೇ ಚಿತ್ರಿತವಾಗಿರೋ ಸಾಹಿತ್ಯ, ಸಿನೆಮಾ, ನಾಟಕ ಎಲ್ಲವನ್ನೂ ನಾವು ವಿರೋಧಿಸಬೇಕು ಎಂದು ನಮ್ಮ ಹಲವು ಲೇಖಕರು ಹೇಳುತ್ತಾರೆ.
ಹಾಗಾದರೆ ವಾಸ್ತವ ಏನು? ಭಾರತದಲ್ಲಿ ದಾರಿದ್ರ್ಯ ಇಲ್ಲವೆ? ಭ್ರಷ್ಟಾಚಾರ ಇಲ್ಲವೆ? ಅದನ್ನೆಲ್ಲ ಒಪ್ಪಿಕೊಳ್ಳಲೇಬೇಕಲ್ಲವೆ? – ಹಾಗಂತ ಇನ್ನೊಂದು ಬಣ ವಾದಿಸುತ್ತದೆ.
ಎಲ್ಲಕ್ಕಿಂತ ಮುಖ್ಯ ವಾದ ಎಂದರೆ ವಿದೇಶಗಳಲ್ಲಿ ಭಾರತವನ್ನು ಕೆಟ್ಟ ದೇಶ ಎಂದು ಚಿತ್ರಿಸಬಾರದು ಎನ್ನುವುದು. ಇದನ್ನು ಅಪ್ಪಟ ಭಾರತೀಯತೆ ಎಂದೇ ಒಪ್ಪೋಣ.
ಭಾರತೀಯರ ಸಾಧನೆಗಳನ್ನು ಮಾತ್ರ ಹೊರಗಡೆ ಬಿಂಬಿಸಬೇಕು ಎಂಬುದು ಮೂಲಭೂತವಾದ ಎಂದೇ ನನ್ನ ಅನಿಸಿಕೆ. ಭಾರತದ ಭದ್ರತಾ ವ್ಯವಸ್ಥೆಯ ಬಗ್ಗೆಯೋ, ಆಂತರಿಕ ಸುರಕ್ಷತೆ ವಿಷಯಗಳ ಬಗ್ಗೆಯೋ ಬಹಿರಂಗವಾಗಿ ಚರ್ಚೆಯಾಗಬಾರದು ಎಂಬುದಷ್ಟೇ ನನ್ನ ಕಾಳಜಿ.
ಇವತ್ತು ನಮ್ಮ ಬಾಲಿವುಡ್, ಹಾಲಿವುಡ್ ಕಲ್ಪನೆಗಳೇ ಜುಜುಬಿ ಎನ್ನುಂತೆ ವಾಸ್ತವ ಘಟನೆಗಳು (ನವೆಂಬರಿನ ಮುಂಬಯಿ ಭಯೋತ್ಪಾದನೆ ಘಟನೆ, 9/11 ವಿಶ್ವ ಟ್ರೇಡ್ ಸೆಂಟರ್ಗೆ ವಿಮಾನಗಳ ಡಿಕ್ಕಿ) ನಡೆದಿರುವಾಗ, ಈ ಸಿನೆಮಾಗಳಲ್ಲಿ ದಾರಿದ್ರ್ಯವನ್ನು ವೈಭವೀಕರಿಸಲಾಗಿದೆ ಎಂದೋ, ಪುಸ್ತಕದಲ್ಲಿ ಭಾರತೀಯರನ್ನು ಹೀಗಳೆ ಯಲಾಗಿದೆ ಎಂದೋ ವಾದಿಸುವುದು ಮೂರ್ಖತನ. ಭ್ರಷ್ಟಾಚಾರದಲ್ಲಿ ಭಾರತ ಎಷ್ಟು ಮುಂದಿದೆ ಎಂದೋ, ಕರ್ನಾಟಕದಲ್ಲಿ ಭ್ರಷ್ಟಾಚಾರ ಎಷ್ಟು ನಡೆದಿದೆ ಎಂದೋ ವರದಿಗಳು ವಿಶ್ವಸಂಸ್ಥೆಯಿಂದ ಹಿಡಿದು ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರಕಟವಾಗುತ್ತವೆ. ಅವನ್ನೆಲ್ಲ ನಾವು ಬಹಿಷ್ಕರಿಸಲಾದೀತೆ? ಹಾಗೆ ನೋಡಿದರೆ ನಮ್ಮ ಮಾಧ್ಯಮಗಳು ಈ ವರದಿಗಳನ್ನು (ಅವುಗಳಲ್ಲಿ ಹಲವು ಖಾಸಗಿ ಅಂತಾರಾಷ್ಟ್ರೀಯ ಸಂಸ್ಥೆಗಳು) ಬಾಯಿ ಚಪ್ಪರಿಸಿಕೊಂಡು ಬರೆಯುತ್ತವೆ. ಭ್ರಷ್ಟಾಚಾರ: ಭಾರತಕ್ಕೆ ಇಷ್ಟನೇ ಸ್ಥಾನ ಎಂದು ಹೆಡಿಂಗ್ ನೀಡುತ್ತವೆ. ಆಗ ಮಾತ್ರ ನಮ್ಮ ಭಾರತೀಯತೆಯ ಭ್ರಷ್ಟತೆಯ ಬಗ್ಗೆ ನಮಗೆ ಹೆಮ್ಮೆಯಾಗುತ್ತದೆ!
ಇಷ್ಟಕ್ಕೂ ಸ್ಲಮ್ಡಾಗ್ ಮಿಲಿಯನೇರ್ ಸಿನೆಮಾವನ್ನು ನಾನೂ ನೋಡಿದೆ. ಮೊದಲು ನನಗೆ ಇದೊಂದು ಬಾಲಿವುಡ್ ನಿರ್ಮಾಣ ಎಂದೇ ಅನ್ನಿಸಿತ್ತು. ಆದರೆ ಬ್ರಾಂಡ್ ಮಾತ್ರ ಅಂತಾರಾಷ್ಟ್ರೀಯ. ಹಾಗೆ ನೋಡಿದರೆ ಈ ಸಿನೆಮಾದಲ್ಲಿ ಭಾರತದ ಮುಂಬಯಿಯ ದೃಶ್ಯಾವಳಿಗಳನ್ನು ಕಟ್ಟಿಕೊಡಲಾಗಿದೆ ಎನ್ನುವುದು ವಾಸ್ತವ. ಪ್ರಮೋದ್ ಮಹಾಜನ್ನಂಥ ರಾಜಕಾರಣಿಯ ದುರಂತ ಕಥೆಯೇನೂ ಅಲ್ಲಿಲ್ಲ; ನತದೃಷ್ಟ ಹುಡುಗರ ಅನಿ ವಾರ್ಯ ಕ್ರೌರ್ಯದ ಕಥೆಯಿದೆ. ಅದಕ್ಕಿಂತ ಹೆಚ್ಚಾಗಿ ಮಿಲಿಯನೇರ್ ಆದ ಹುಡುಗ ಹೇಗೆ ಉತ್ತರಗಳನ್ನು ಮೊದಲೇ ಕಂಡುಕೊಂಡಿದ್ದ ಎಂಬ ಸಸ್ಪೆನ್ಸ್ ಕೂಡಾ ಹಾಲಿವುಡ್ ಶೈಲಿಯಲ್ಲಿ ಚಿತ್ರಣಗೊಂಡಿದೆ. ರಹಮಾನ್ ಸಂಗೀತ ನನಗಂತೂ ‘ಎಂದಿನಂತೆ’ ಅನಿಸಿತ್ತು. ಆದರೆ ಸಿನೆಮಾ ನೋಡಿದ ಮರುದಿನವೇ ಪತ್ರಿಕೆಯಲ್ಲಿ ಅವರು ಗೋಲ್ಡನ್ ಗ್ಲೋಬ್ ಪಡೆದ ಸುದ್ದಿಯಿತ್ತು! ಇರಲಿ ಬಿಡಿ, ಹೇಗೂ ರಹಮಾನ್ ಅಂಥ ಪ್ರತಿಷ್ಠಿತ ಪ್ರಶಸ್ತಿಗೆ ಅರ್ಹವಾಗಿದ್ದರು ತಾನೆ?…..
ಪೂರ್ಣ ಬರಹಕ್ಕೆ ಮಿತ್ರ ಮಾಧ್ಯಮ ಕ್ಕೆ ಭೇಟಿ ಕೊಡಿ.
mitra madhyama link is not working !
vichArapUrNa barahada link neeDiddakke dhanyavAda.
Hema,
http// – eraDu sArti ide. tegedu hAki. work Agatte.
ನಮಸ್ತೇ,
ಮಿತ್ರಮಾಧ್ಯಮದಲ್ಲಿ ಕಮೆಂಟಿಸಲು ಸಾಧ್ಯವಾಗಲಿಲ್ಲ.
ನಿಜಕ್ಕೂ ಇದು ಅತ್ಯುತ್ತಮ ಬರಹ. ಬಹಳ ಸರಿಯೆನಿಸಿತು. ಸಿನೆಮಾದ ಹಿನ್ನೆಲೆಯಲ್ಲಿ ಇವತ್ತಿನ ‘ರಾಷ್ಟ್ರೀಯತೆ’ಯ ಸ್ಥಿತಿಯನ್ನು ಬಹಳ ಚೆನ್ನಾಗಿ ಹೇಳಿದ್ದಾರೆ. ಒಳ್ಳೆಯ ಬರಹವನ್ನು ಓದಲು ನೀಡಿದ್ದಕ್ಕೆ ಥ್ಯಾಂಕ್ಸ್. ಈ ಸೈಟ್ ಬಗ್ಗೆ ಗೊತ್ತಿರಲಿಲ್ಲ. ಪರಿಚಯಿಸಿದ್ದಕ್ಕೆ ಮತ್ತೊಮ್ಮೆ ಥ್ಯಾಂಕ್ಸ್.
ವಂದೇ,
ಚೇತನಾ ತೀರ್ಥಹಳ್ಳಿ
uttama baraha sirr…. sudarshana hattira 2 varshada hinde maatadida nenapide. eega avraddu mitramaadhyama kottiddeeri… thank u
ಹೇಮಶ್ರೀ ಅವರೇ,
ಲಿಂಕ್ ಸರಿಪಡಿಸಲಾಗಿದೆ. ತೊಂದರೆಯಾಗಿದ್ದಕ್ಕೆ ಕ್ಷಮೆ ಇರಲಿ.
ಸಾಂಗತ್ಯ
ಚಲನಚಿತ್ರದಲ್ಲಿ ಬಡತನ ತೋರಿಸಿದ್ದಾರೆಯೋ ಅಥವಾ ಸಿರಿವಂತಿಕೆಯನ್ನು ತೋರಿಸಿದ್ದಾರೊ ಎನ್ನುವದು ಮುಖ್ಯವಲ್ಲ. ನಿರ್ದೇಶನ ಹೇಗಿದೆ ಎನ್ನುವದಷ್ಟೇ ಮುಖ್ಯ. ಆ ಕೋನದಿಂದ ನೋಡಿದಾಗ Slumdog ಒಂದು ಸಾಧಾರಣ ಚಿತ್ರ. ಕೊನೆಯವರೆಗೂ ಆಸಕ್ತಿಯನ್ನು ಕಾಯ್ದುಕೊಂಡು ಹೋಗುತ್ತದೆ ಎನ್ನುವದೊಂದೇ ಇದರಲ್ಲಿಯ plus point.
ರಹಮಾನರ ಸಂಗೀತ ಈ ಚಿತ್ರದಲ್ಲಿ ಸಾಧಾರಣ ಮಟ್ಟದಲ್ಲಿದೆ. ಇದಕ್ಕಿಂತ ಒಳ್ಳೆಯ ಸಂಗೀತವನ್ನು ಅವರು ಬೇರೆ ಚಿತ್ರಗಳಿಗೆ ಕೊಟ್ಟಿದ್ದಾರೆ.
I am not saying that it is a bad picture, but not convinced that it was worth so many awards.