ಈಗಾಗಲೇ ನಿಯೋಜಿಸಿರುವಂತೆ ಸಾಂಗತ್ಯ ಏಳನೇ ಚಿತ್ರ ಶಿಬಿರ ಜ.28 ಮತ್ತು 29 ರಂದು ಕುಪ್ಪಳಿಯಲ್ಲಿ ನಡೆಯಲಿದೆ.
ಈ ಬಾರಿ ಐದು ಚಿತ್ರಗಳ ಪ್ರದರ್ಶನ, ಎರಡು ಉಪನ್ಯಾಸ ಹಾಗು ಒಂದು ಮುಕ್ತ ಸಂವಾದವಿರುತ್ತದೆ. ಪ್ರತಿ ಹಂತದಲ್ಲೂ ಸಿನಿಮಾ ಮಾಧ್ಯಮವನ್ನು ಅರ್ಥಮಾಡಿಕೊಳ್ಳುವ ದಿಸೆಯಲ್ಲಿ ಇವೆಲ್ಲವೂ ಪೂರಕವಾಗಲಿವೆ.
ಜ. 28 ರ ಬೆಳಗ್ಗೆ 10 ಕ್ಕೆ ಉದ್ಘಾಟನೆ. ನಂತರ “ಸಾಹಿತ್ಯ ಕೃತಿ ಸಿನಿಮಾ ಆಗುವ ಬಗೆ’ ಕುರಿತು ಸಿನಿತಜ್ಞ ಪರಮೇಶ್ ಗುರುಸ್ವಾಮಿ ಅವರು ಮಾತನಾಡುವರು. ನಂತರ ಸ್ವಲ್ಪ ಹೊತ್ತು ಆ ಕುರಿತೇ ಸಂವಾದವಿರಲಿದೆ.
ನಂತರ ಒಂದಿಷ್ಟು ಮಾಹಿತಿಯೊಂದಿಗೆ ಎಂದಿನಂತೆ ಸಿನಿಮಾ ಪ್ರದರ್ಶನ. ಬಳಿಕ ಚರ್ಚೆ. ಮೊದಲ ದಿನದ ಚರ್ಚೆಯಲ್ಲಿ ಪರಮೇಶ್ ಗುರಸ್ವಾಮಿಯವರು ಪಾಲ್ಗೊಂಡರೆ, ಎರಡನೇ ದಿನದ ಚರ್ಚೆಯಲ್ಲಿ ಚಿತ್ರ ನಿರ್ದೇಶಕ ಅಶೋಕ್ ಕಶ್ಯಪ್ ಹಾಗು ಚಿತ್ರ ನಿರ್ಮಾಪಕಿ ರೇಖಾ ರಾಣಿ ಭಾಗವಹಿಸುವರು.
ಜ. 29 ರಂದು ಬೆಳಗ್ಗೆ 9 ಕ್ಕೆ ಆರಂಭ. ಚಿತ್ರ ಪ್ರದರ್ಶನದ ನಂತರ “ಇಂದಿನ ತಾಂತ್ರಿಕ ಆವಿಷ್ಕಾರಗಳು ಸಿನಿಮಾವೆಂಬ ಸೃಜನಶೀಲ ಕಲೆಗೆ ಹೇಗೆ ಪೂರಕವಾಗುತ್ತಿವೆ ?’ ಎಂಬ ವಿಷಯ ಕುರಿತಂತೆ ಮಾತನಾಡುವರು. ನಂತರ ಸಂವಾದವಿರುತ್ತದೆ. ಸಂಜೆ 4. 30 ಕ್ಕೆ ನಡೆಯುವ ಸಮಾರೋಪಕ್ಕೆ ಮುನ್ನ ನಡೆಯುವ ಮುಕ್ತ ಸಂವಾದದಲ್ಲಿ ಅಶೋಕ್ ಕಶ್ಯಪ್ ಹಾಗೂ ರೇಖಾರಾಣಿ ಪಾಲ್ಗೊಳ್ಳುವರು.












